ಡಾ. ಹಾ.ಮಾ.ನಾಯಕರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಯೋಜನೆಯೊಂದನ್ನು ರೂಪಿಸಿದ್ದರು. ಅದರಂತೆ, ವೃತ್ತಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ವರ್ಷಪೂರ್ತಿ ಪ್ರಕಟವಾಗುತ್ತಿದ್ದ ಕಾವ್ಯ, ಸಣ್ಣಕಥೆ, ವಿಮರ್ಶೆ, ಪ್ರಬಂಧ, ವಿನೋದ, ವಿಜ್ಞಾನ, ಮಕ್ಕಳ ಸಾಹಿತ್ಯದಂತಹ ಬರಹಗಳನ್ನು ಒಟ್ಟುಗೂಡಿಸಲು, ಬರಹಗಾರ ರೊಬ್ಬರಿಗೆ ಸಂಪಾದನೆಯ ಕೆಲಸ ವಹಿಸಿ ಅದನ್ನು ಅಕಾಡೆಮಿಯ ಪ್ರಕಾಶತ್ವದ ಅಡಿಯಲ್ಲಿ ಪ್ರಕಟಿಸುತ್ತಿದ್ದರು.