ಜನರ ಮತಗಳ ಆಧಾರದಲ್ಲಿ ಅಧಿಕಾರ ಪಡೆದ ಜನಪ್ರತಿನಿಧಿಯೊಬ್ಬ, ಮತದಾರರ ಹಿತಾಸಕ್ತಿಗೆ ಧಕ್ಕೆ ಆಗದಂತೆ ಕಾರ್ಯ ನಿರ್ವಹಿಸಬೇಕು. ಅದು ಅವನ ಜವಾಬ್ದಾರಿ. ಆದರೆ ಈಗ ಆಗುತ್ತಿರುವುದೇನು? ಮತದಾರನ ಹಿತಾಸಕ್ತಿ ಕಾಪಾಡುವುದಿರಲಿ, ಜನಪ್ರತಿನಿಧಿಗಳು ಅಧಿಕಾರ ಸಿಕ್ಕಿದೊಡನೆಯೇ ತಮ್ಮ ಮಾನ– ಮರ್ಯಾದೆಯನ್ನೂ ಲೆಕ್ಕಿಸದೆ ಸಂಪತ್ತು ಕೂಡಿಡಲು ಪ್ರಾರಂಭಿಸುತ್ತಾರೆ. ಪಕ್ಷಾಂತರ, ರಾಜೀನಾಮೆ, ವಿಪ್ ಉಲ್ಲಂಘನೆ, ಪಕ್ಷ ವಿರೋಧಿ ಚಟುವಟಿಕೆ... ಇವೆಲ್ಲವೂ ಭ್ರಷ್ಟಾಚಾರದ ಬೇರೆ ಬೇರೆ ಮುಖಗಳೇ ಆಗಿವೆ.