ಇಲ್ಲಿ, ಶಾಲಾ ಮಕ್ಕಳ ಪಠ್ಯಪುಸ್ತಕಗಳ ಬಗ್ಗೆ ಕೂಡ ಅದೇ ಜಾತಿ ಪಕ್ಷಪಾತದ ಆರೋಪಗಳು ಕೇಳಿಬರುತ್ತಿವೆ. ಆಗುತ್ತಿರುವ ಚರ್ಚೆಗಳಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರನ್ನು ದೂಷಿಸಲಾಗುತ್ತಿದೆ. ದಶಕಗಳ ಅನುಭವದಿಂದ ಹೇಳುವುದಾದರೆ, ಇವರೆಲ್ಲರೂ ಬಲಿಪಶುಗಳು, ಆಟದಲ್ಲಿ ದಾಳಗಳಷ್ಟೇ. ಈ ಸಮಿತಿಯ ನೇಮಕಾತಿಯಿಂದ ಶುರುವಾಗಿ ಪಠ್ಯ, ಲೇಖಕರು ಎಲ್ಲವನ್ನೂ ನಿರ್ಣಯಿಸುವುದು ‘ಕೇಶವನ ಕೃಪೆ’ಯಡಿಯಲ್ಲಿ. ವಿವರಿಸಿ ಹೇಳುವುದಾದರೆ ‘ಸಂಘ ವಿನಾ ತೃಣಮಪಿ ನ ಚಲತಿ’. ಚುನಾವಣೆಗೆ ಅಭ್ಯರ್ಥಿಗಳು ಮಾತ್ರವಲ್ಲದೆ ಸಂಘದ ಒಪ್ಪಿಗೆ ಪಡೆಯದೆ ಅಥವಾ ಗಮನಕ್ಕೆ ಬಾರದೆ ಒಂದು ತೃಣವೂ ಚಲಿಸುವುದಿಲ್ಲ. ಅವರ ನಿರ್ಧಾರದಂತೆಯೇ ಸಮಿತಿಯ ಪ್ರತಿಯೊಬ್ಬರೂ ಸಹಿ ಹಾಕಿ ಅದಕ್ಕೆ ಅಧಿಕೃತವೆಂಬ ಮುದ್ರೆ ಹಾಕಲಾಗುತ್ತದೆ. ಈ ಹಿನ್ನೆಲೆಯಲ್ಲಿ, ತಮ್ಮ ಅಜೆಂಡಾ ಸುಸೂತ್ರವಾಗಿ ಕಾರ್ಯರೂಪಕ್ಕೆ ಬರಲು, ಬೇಕಾದವರನ್ನು ಆರಿಸಿರುವುದು ಕಣ್ಣಿಗೆ ಗೋಚರವಾಗುವುದಿಲ್ಲವೇ? ಈ ವಸ್ತುಸ್ಥಿತಿಯಲ್ಲಿ ಇವರೆಲ್ಲರೂ ಪಾತ್ರಧಾರಿಗಳಷ್ಟೇ, ಸೂತ್ರಧಾರರು ಮರೆಯಲ್ಲಿದ್ದಾರೆ.
–ಕೆ.ಎನ್.ಭಗವಾನ್,ಬೆಂಗಳೂರು