<p>ಬಿಜೆಪಿಯು ಬ್ರಾಹ್ಮಣರ ಪಕ್ಷ ಎಂಬ ಆರೋಪಗಳು ಅನೂಚಾನವಾಗಿ ಕೇಳಿಬರುತ್ತಿವೆ. ಈ ಆಕ್ಷೇಪಗಳಿಗೆ ಹುರುಳಿಲ್ಲ ಎಂಬುದನ್ನು ದೃಢೀಕರಿಸುವಂತೆ, ಚುನಾವಣೆಗಳಿಗೆ ಅಭ್ಯರ್ಥಿಗಳನ್ನು ಆರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಬಿ.ಎಲ್.ಸಂತೋಷ್ ಅವರ ವೈಖರಿ, ಮಾನದಂಡ, ಆಶ್ಚರ್ಯದ ಜೊತೆಗೆ ಮೆಚ್ಚುಗೆ ಪಡೆಯುತ್ತಿವೆ. ಸಂತೋಷ್ ಅವರು ಪಕ್ಷಪಾತಕ್ಕೆ ಗುರಿಯಾಗದೆ ಸಮಾಜದ ಎಲ್ಲ ವರ್ಗಗಳು ಹಾಗೂ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಆ ಬಳಿಕ ಒಂದು ನಿಲುವು ತೆಗೆದುಕೊಳ್ಳುತ್ತಿದ್ದಾರೆ. ಮೇಲ್ವಿಚಾರಕರಾಗಿ ಸಂತೋಷ್ ಅವರು ಸಂಘದ ಪ್ರತಿನಿಧಿಯಾಗಿದ್ದಾರೆ.</p>.<p>ಇಲ್ಲಿ, ಶಾಲಾ ಮಕ್ಕಳ ಪಠ್ಯಪುಸ್ತಕಗಳ ಬಗ್ಗೆ ಕೂಡ ಅದೇ ಜಾತಿ ಪಕ್ಷಪಾತದ ಆರೋಪಗಳು ಕೇಳಿಬರುತ್ತಿವೆ. ಆಗುತ್ತಿರುವ ಚರ್ಚೆಗಳಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರನ್ನು ದೂಷಿಸಲಾಗುತ್ತಿದೆ. ದಶಕಗಳ ಅನುಭವದಿಂದ ಹೇಳುವುದಾದರೆ, ಇವರೆಲ್ಲರೂ ಬಲಿಪಶುಗಳು, ಆಟದಲ್ಲಿ ದಾಳಗಳಷ್ಟೇ. ಈ ಸಮಿತಿಯ ನೇಮಕಾತಿಯಿಂದ ಶುರುವಾಗಿ ಪಠ್ಯ, ಲೇಖಕರು ಎಲ್ಲವನ್ನೂ ನಿರ್ಣಯಿಸುವುದು ‘ಕೇಶವನ ಕೃಪೆ’ಯಡಿಯಲ್ಲಿ. ವಿವರಿಸಿ ಹೇಳುವುದಾದರೆ ‘ಸಂಘ ವಿನಾ ತೃಣಮಪಿ ನ ಚಲತಿ’. ಚುನಾವಣೆಗೆ ಅಭ್ಯರ್ಥಿಗಳು ಮಾತ್ರವಲ್ಲದೆ ಸಂಘದ ಒಪ್ಪಿಗೆ ಪಡೆಯದೆ ಅಥವಾ ಗಮನಕ್ಕೆ ಬಾರದೆ ಒಂದು ತೃಣವೂ ಚಲಿಸುವುದಿಲ್ಲ. ಅವರ ನಿರ್ಧಾರದಂತೆಯೇ ಸಮಿತಿಯ ಪ್ರತಿಯೊಬ್ಬರೂ ಸಹಿ ಹಾಕಿ ಅದಕ್ಕೆ ಅಧಿಕೃತವೆಂಬ ಮುದ್ರೆ ಹಾಕಲಾಗುತ್ತದೆ. ಈ ಹಿನ್ನೆಲೆಯಲ್ಲಿ, ತಮ್ಮ ಅಜೆಂಡಾ ಸುಸೂತ್ರವಾಗಿ ಕಾರ್ಯರೂಪಕ್ಕೆ ಬರಲು, ಬೇಕಾದವರನ್ನು ಆರಿಸಿರುವುದು ಕಣ್ಣಿಗೆ ಗೋಚರವಾಗುವುದಿಲ್ಲವೇ? ಈ ವಸ್ತುಸ್ಥಿತಿಯಲ್ಲಿ ಇವರೆಲ್ಲರೂ ಪಾತ್ರಧಾರಿಗಳಷ್ಟೇ, ಸೂತ್ರಧಾರರು ಮರೆಯಲ್ಲಿದ್ದಾರೆ.<br /><em><strong>–ಕೆ.ಎನ್.ಭಗವಾನ್,ಬೆಂಗಳೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಿಜೆಪಿಯು ಬ್ರಾಹ್ಮಣರ ಪಕ್ಷ ಎಂಬ ಆರೋಪಗಳು ಅನೂಚಾನವಾಗಿ ಕೇಳಿಬರುತ್ತಿವೆ. ಈ ಆಕ್ಷೇಪಗಳಿಗೆ ಹುರುಳಿಲ್ಲ ಎಂಬುದನ್ನು ದೃಢೀಕರಿಸುವಂತೆ, ಚುನಾವಣೆಗಳಿಗೆ ಅಭ್ಯರ್ಥಿಗಳನ್ನು ಆರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಬಿ.ಎಲ್.ಸಂತೋಷ್ ಅವರ ವೈಖರಿ, ಮಾನದಂಡ, ಆಶ್ಚರ್ಯದ ಜೊತೆಗೆ ಮೆಚ್ಚುಗೆ ಪಡೆಯುತ್ತಿವೆ. ಸಂತೋಷ್ ಅವರು ಪಕ್ಷಪಾತಕ್ಕೆ ಗುರಿಯಾಗದೆ ಸಮಾಜದ ಎಲ್ಲ ವರ್ಗಗಳು ಹಾಗೂ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಆ ಬಳಿಕ ಒಂದು ನಿಲುವು ತೆಗೆದುಕೊಳ್ಳುತ್ತಿದ್ದಾರೆ. ಮೇಲ್ವಿಚಾರಕರಾಗಿ ಸಂತೋಷ್ ಅವರು ಸಂಘದ ಪ್ರತಿನಿಧಿಯಾಗಿದ್ದಾರೆ.</p>.<p>ಇಲ್ಲಿ, ಶಾಲಾ ಮಕ್ಕಳ ಪಠ್ಯಪುಸ್ತಕಗಳ ಬಗ್ಗೆ ಕೂಡ ಅದೇ ಜಾತಿ ಪಕ್ಷಪಾತದ ಆರೋಪಗಳು ಕೇಳಿಬರುತ್ತಿವೆ. ಆಗುತ್ತಿರುವ ಚರ್ಚೆಗಳಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರನ್ನು ದೂಷಿಸಲಾಗುತ್ತಿದೆ. ದಶಕಗಳ ಅನುಭವದಿಂದ ಹೇಳುವುದಾದರೆ, ಇವರೆಲ್ಲರೂ ಬಲಿಪಶುಗಳು, ಆಟದಲ್ಲಿ ದಾಳಗಳಷ್ಟೇ. ಈ ಸಮಿತಿಯ ನೇಮಕಾತಿಯಿಂದ ಶುರುವಾಗಿ ಪಠ್ಯ, ಲೇಖಕರು ಎಲ್ಲವನ್ನೂ ನಿರ್ಣಯಿಸುವುದು ‘ಕೇಶವನ ಕೃಪೆ’ಯಡಿಯಲ್ಲಿ. ವಿವರಿಸಿ ಹೇಳುವುದಾದರೆ ‘ಸಂಘ ವಿನಾ ತೃಣಮಪಿ ನ ಚಲತಿ’. ಚುನಾವಣೆಗೆ ಅಭ್ಯರ್ಥಿಗಳು ಮಾತ್ರವಲ್ಲದೆ ಸಂಘದ ಒಪ್ಪಿಗೆ ಪಡೆಯದೆ ಅಥವಾ ಗಮನಕ್ಕೆ ಬಾರದೆ ಒಂದು ತೃಣವೂ ಚಲಿಸುವುದಿಲ್ಲ. ಅವರ ನಿರ್ಧಾರದಂತೆಯೇ ಸಮಿತಿಯ ಪ್ರತಿಯೊಬ್ಬರೂ ಸಹಿ ಹಾಕಿ ಅದಕ್ಕೆ ಅಧಿಕೃತವೆಂಬ ಮುದ್ರೆ ಹಾಕಲಾಗುತ್ತದೆ. ಈ ಹಿನ್ನೆಲೆಯಲ್ಲಿ, ತಮ್ಮ ಅಜೆಂಡಾ ಸುಸೂತ್ರವಾಗಿ ಕಾರ್ಯರೂಪಕ್ಕೆ ಬರಲು, ಬೇಕಾದವರನ್ನು ಆರಿಸಿರುವುದು ಕಣ್ಣಿಗೆ ಗೋಚರವಾಗುವುದಿಲ್ಲವೇ? ಈ ವಸ್ತುಸ್ಥಿತಿಯಲ್ಲಿ ಇವರೆಲ್ಲರೂ ಪಾತ್ರಧಾರಿಗಳಷ್ಟೇ, ಸೂತ್ರಧಾರರು ಮರೆಯಲ್ಲಿದ್ದಾರೆ.<br /><em><strong>–ಕೆ.ಎನ್.ಭಗವಾನ್,ಬೆಂಗಳೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>