ಬೆಳಕಿಗೆ ಬರುವ ಇಂತಹ ಅನೇಕ ಪ್ರಕರಣಗಳು ಸುದ್ದಿ ಮಾಡಿದಷ್ಟೇ ವೇಗವಾಗಿ ಹಿನ್ನೆಲೆಗೆ ಸರಿದುಬಿಡು
ತ್ತವೆ. ಅದಾಗಬಾರದು. ಸರ್ಕಾರ ಮತ್ತು ನಿಜವಾದ ಮಾಲೀಕರ ಜಮೀನು ಭೂಗಳ್ಳರ ಪಾಲಾಗುವುದನ್ನು ಮತ್ತು ಇದರಿಂದ ಸರ್ಕಾರ ಮತ್ತು ಜಮೀನು ಮಾಲೀಕರು ಅನವಶ್ಯಕವಾಗಿ ನ್ಯಾಯಾಲಯದ ಮೆಟ್ಟಿಲೇರುವುದನ್ನು ತಪ್ಪಿಸಲು, ಸಂಬಂಧಿಸಿದ ಎಲ್ಲ ಇಲಾಖೆಗಳ ಗ್ರಾಮ, ಹೋಬಳಿ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿ-ನೌಕರರ ಮೇಲೆ ಮೇಲಧಿಕಾರಿಗಳು ಹದ್ದಿನ ಕಣ್ಣಿಡಬೇಕು. ಈಗಾಗಲೇ ಮುದ್ರಾಂಕ ಇಲಾಖೆಯಲ್ಲಿ ಚಾಲ್ತಿಯಲ್ಲಿರುವ ‘ಕಾವೇರಿ’ ತಂತ್ರಾಂಶದಲ್ಲಿ ಸ್ವತ್ತಿನ ಮಾಲೀಕರ ಮತ್ತು ಸ್ವತ್ತಿನ ಭಾವಚಿತ್ರ, ಚೆಕ್ಕುಬಂದಿ, ಡಿಜಿಟಲ್ ಸಹಿ ಮತ್ತು ಬಾರ್ಕೋಡ್ಗಳು ಲಭ್ಯವಿರುವುದರಿಂದ, ಅದನ್ನು ಸದ್ಬಳಕೆ ಮಾಡಿಕೊಂಡು ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು.