ಫಲಾನುಭವಿಗಳ ಪಟ್ಟಿಗೆ ಶಾಸಕರು, ಜಿಲ್ಲಾಧಿಕಾರಿ ಮುಂತಾದವರನ್ನು ಒಳಗೊಂಡ ಸಮಿತಿಯ ಒಪ್ಪಿಗೆ ಕಡ್ಡಾಯವಾಗಲಿರುವುದರಿಂದ, ಈ ಸಮಿತಿ ತನ್ನ ಉದ್ದೇಶಕ್ಕೆ ಪೂರಕವಾಗಿ ಸಾಮಾಜಿಕ ಬದ್ಧತೆಯನ್ನು ಮೈಗೂಡಿಸಿಕೊಂಡರೆ ಯೋಜನೆಗೆ ಅರ್ಥ ಬರುತ್ತದೆ. ಇಲ್ಲವಾದರೆ ಕೋಟೆ ಕಾಯಲು ಮತ್ಯಾರನ್ನೋ ನೇಮಿಸಿದಂತೆ ಆಗುತ್ತದೆ.ಅಶ್ವತ್ಥ ಕಲ್ಲೇದೇವರಹಳ್ಳಿ, ಕಡೂರು