ಅಭಿವೃದ್ಧಿಯ ಹೆಸರಿನಲ್ಲಿ ನೆಲ, ಜಲ, ಆಕಾಶ ಎಲ್ಲವನ್ನೂ ಆಕ್ರಮಿಸುತ್ತಿರುವ ಮಾನವನ ದುರಾಸೆಗೆ ಮುಗ್ಧ ಕಾಡುಪ್ರಾಣಿಗಳು ಬಲಿಯಾಗುತ್ತಿವೆ. ಮನುಷ್ಯ ತನ್ನ ಅತಿ ಆಸೆಯನ್ನು ಈಡೇರಿಸಿಕೊಳ್ಳಲು ಇತರ ಪ್ರಾಣಿಗಳ ಆವಾಸ ಸ್ಥಾನವನ್ನು ಆಕ್ರಮಿಸಿ, ಅವುಗಳನ್ನು ಸೀಮಿತ ಪರಿಧಿಯೊಳಗೆ ಇರಿಸಲು ಬೇಲಿ ನಿರ್ಮಿಸಿದ್ದಾನೆ. ವಾಸ್ತವದಲ್ಲಿ ಮಾನವನೇ ದುಷ್ಟ ಪ್ರಾಣಿ.