<p>‘ಇದೆಂಥಾ ಪ್ರಜಾಪ್ರಭುತ್ವ ಸ್ವಾಮಿ?’ ಎಂಬ ಲೇಖನದಲ್ಲಿರವೀಂದ್ರ ಭಟ್ಟ ಅವರು, ‘ರಾಜಕಾರಣಿಗಳ ಬಗ್ಗೆಯೇ ಜನರಿಗೆ ಭ್ರಮನಿರಸನವಾಗಿದೆ. ಭರವಸೆಯ ನಾಯಕನೊಬ್ಬ ಈಗ ಹುಟ್ಟಿಬರಬೇಕಿದೆ. ಅದಕ್ಕೆ ಅಖಾಡ ಸಿದ್ಧವಾಗಿದೆ. ಆದರೆ ಆಶಾಕಿರಣ ಗೋಚರಿಸುತ್ತಿಲ್ಲ. ನೆಲ ಹದವಾಗಿದೆ. ಬೀಜ ಬಿತ್ತುವವರಿಲ್ಲ’ ಎಂದು ಹೇಳಿದ್ದಾರೆ.</p>.<p>ನಮ್ಮ ರಾಜ್ಯದಲ್ಲಷ್ಟೇ ಅಲ್ಲ, ಎಲ್ಲ ರಾಜ್ಯಗಳವರೂ ತಮ್ಮತಮ್ಮ ಪಕ್ಷದ ವರಿಷ್ಠ ಮಂಡಳಿ ಎಂಬ ಒಂದು ಅನಿಷ್ಟದ ಆದೇಶಗಳಿಗೆ ಬದ್ಧವಾಗಿದ್ದಾರೆ. ಹೀಗಾಗಿಯೇ ನಮ್ಮ ರಾಜ್ಯದಲ್ಲಿ ಇರುವಂತೆಯೇ ಬೇರೆಲ್ಲಾ ರಾಜ್ಯಗಳಲ್ಲೂ ವರಿಷ್ಠರೇ ಮೂಗುತೂರಿಸುವವರು. ಈ ಅನಿಷ್ಟ ಪದ್ಧತಿಯನ್ನು ತೊಡೆದುಹಾಕುವವರೆಗೆ ನಮ್ಮಲ್ಲಿ ನೈಜ ಪ್ರಜಾಪ್ರಭುತ್ವ ಬರಲಾರದು. ಆಯ್ಕೆಯಾದ ಜನಪ್ರತಿನಿಧಿಗಳು ತಮ್ಮ ಪಕ್ಷದ ನಾಯಕನನ್ನು ಆಯ್ಕೆ ಮಾಡಬೇಕು. ಇಲ್ಲಿ ತಲೆಕೆಳಗು. ಆಯ್ಕೆಗೊಂಡವರು ಹೌದಪ್ಪಗಳು ಮಾತ್ರ. ಆ ವರಿಷ್ಠರು ಆಯ್ಕೆಗೊಂಡ ಮಂದಿಯೇ? ಯಾರಿಂದ? ಈ ದೇಶದ ಯಾವ ಪಕ್ಷಗಳಲ್ಲಿಯೂ ನಾಯಕಸ್ಥಾನ ಸ್ಪರ್ಧಾತ್ಮಕವಾಗಿ ಗಳಿಸಿದುದಾಗಿಲ್ಲ.</p>.<p>ಎಲ್ಲ ಪಕ್ಷಗಳವರೂ ಒಮ್ಮತದ ಆಯ್ಕೆ ಎನ್ನುವ ನೆಪ ಹೇಳುತ್ತಾರೆ. ಈ ಒಮ್ಮತಕ್ಕೆ ಮುನ್ನವಾದರೂ ಕನಿಷ್ಠ ಇಬ್ಬರು ಸ್ಪರ್ಧಿಗಳು ಇರಬೇಕಲ್ಲ; ಇರುತ್ತಾರೆ. ಒಬ್ಬನನ್ನು ಹೇಗೋ ಏನೋ ಆಮಿಷವೊಡ್ಡಿ ಪುಸಲಾಯಿಸಿ ಹಿಂದೆಗೆಯುವಂತೆ ಮಾಡಿ, ಒಮ್ಮತ ಸಾಧನೆ ಎಂದು ಬೀಗುವ ಪರಿಪಾಟ ಎಲ್ಲ ಪಕ್ಷಗಳಲ್ಲೂ ಇದೆ. ಜಾತಿ, ಮಠ, ವೋಟ್ ಬ್ಯಾಂಕ್, ಹಣ, ಹೆಂಡ, ಇನ್ನೂ ಏನೇನೋ ಯಾವ್ಯಾವುದೋ ಅಪಸವ್ಯಗಳ ಪ್ರಭಾವ ಬೇರೆ. ಈ ಉಪಕರಣಗಳಿಲ್ಲದೆ ಚುನಾವಣೆಗಳು ಈ ದೇಶದಲ್ಲಿ ಅಸಾಧ್ಯ.</p>.<p>‘ಪ್ರಜಾಪ್ರಭುತ್ವ ಎಲ್ಲಿದೆ ಸ್ವಾಮೀ?’ ಎಂದು ಕಲ್ಪನೆಯ ಆದರ್ಶದ ನೆಲೆಯಲ್ಲಿ ಸುಮ್ಮನೆ ತೊಳಲುವುದಕ್ಕಿಂತ, ಆಯ್ಕೆ ಮಾಡುವುದಷ್ಟೇ ನಮಗೆ, ಅಂದರೆ ಪ್ರಜೆಗಳಿಗೆ ಇರುವ ಅವಕಾಶ. ಐದು ವರ್ಷಗಳವರೆಗೆ ಕಮ್ ಕಿಮ್ ಎನ್ನದೇ ಸುಮ್ಮಗಿರುತ್ತ ಮತ್ತೊಮ್ಮೆ ಆಯ್ಕೆಯ ಅವಕಾಶಕ್ಕಾಗಿ ಕಾಯುವುದೇ ನಮ್ಮಲ್ಲಿನ ಪ್ರಜಾಪ್ರಭುತ್ವ. ಪ್ರಜೆಗಳೂ ಈಗಾಗಲೇ ಈ ದುರವಸ್ಥೆಯ ಪದ್ಧತಿಗೆ ಅನಿವಾರ್ಯವಾಗಿ ತಮ್ಮನ್ನು ಹೊಂದಿಸಿಕೊಂಡಿದ್ದಾರೆ. ಹೀಗಿರುವಾಗ ಎಲ್ಲಿಯ ನೆಲ, ಏನು ಹದ, ಯಾವುದು ಬೀಜ? ಬಿತ್ತುವವರು ಎಲ್ಲಿದ್ದಾರೆ?</p>.<p><strong>-ಸಾಮಗ ದತ್ತಾತ್ರಿ,ಬೆಂಗಳೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಇದೆಂಥಾ ಪ್ರಜಾಪ್ರಭುತ್ವ ಸ್ವಾಮಿ?’ ಎಂಬ ಲೇಖನದಲ್ಲಿರವೀಂದ್ರ ಭಟ್ಟ ಅವರು, ‘ರಾಜಕಾರಣಿಗಳ ಬಗ್ಗೆಯೇ ಜನರಿಗೆ ಭ್ರಮನಿರಸನವಾಗಿದೆ. ಭರವಸೆಯ ನಾಯಕನೊಬ್ಬ ಈಗ ಹುಟ್ಟಿಬರಬೇಕಿದೆ. ಅದಕ್ಕೆ ಅಖಾಡ ಸಿದ್ಧವಾಗಿದೆ. ಆದರೆ ಆಶಾಕಿರಣ ಗೋಚರಿಸುತ್ತಿಲ್ಲ. ನೆಲ ಹದವಾಗಿದೆ. ಬೀಜ ಬಿತ್ತುವವರಿಲ್ಲ’ ಎಂದು ಹೇಳಿದ್ದಾರೆ.</p>.<p>ನಮ್ಮ ರಾಜ್ಯದಲ್ಲಷ್ಟೇ ಅಲ್ಲ, ಎಲ್ಲ ರಾಜ್ಯಗಳವರೂ ತಮ್ಮತಮ್ಮ ಪಕ್ಷದ ವರಿಷ್ಠ ಮಂಡಳಿ ಎಂಬ ಒಂದು ಅನಿಷ್ಟದ ಆದೇಶಗಳಿಗೆ ಬದ್ಧವಾಗಿದ್ದಾರೆ. ಹೀಗಾಗಿಯೇ ನಮ್ಮ ರಾಜ್ಯದಲ್ಲಿ ಇರುವಂತೆಯೇ ಬೇರೆಲ್ಲಾ ರಾಜ್ಯಗಳಲ್ಲೂ ವರಿಷ್ಠರೇ ಮೂಗುತೂರಿಸುವವರು. ಈ ಅನಿಷ್ಟ ಪದ್ಧತಿಯನ್ನು ತೊಡೆದುಹಾಕುವವರೆಗೆ ನಮ್ಮಲ್ಲಿ ನೈಜ ಪ್ರಜಾಪ್ರಭುತ್ವ ಬರಲಾರದು. ಆಯ್ಕೆಯಾದ ಜನಪ್ರತಿನಿಧಿಗಳು ತಮ್ಮ ಪಕ್ಷದ ನಾಯಕನನ್ನು ಆಯ್ಕೆ ಮಾಡಬೇಕು. ಇಲ್ಲಿ ತಲೆಕೆಳಗು. ಆಯ್ಕೆಗೊಂಡವರು ಹೌದಪ್ಪಗಳು ಮಾತ್ರ. ಆ ವರಿಷ್ಠರು ಆಯ್ಕೆಗೊಂಡ ಮಂದಿಯೇ? ಯಾರಿಂದ? ಈ ದೇಶದ ಯಾವ ಪಕ್ಷಗಳಲ್ಲಿಯೂ ನಾಯಕಸ್ಥಾನ ಸ್ಪರ್ಧಾತ್ಮಕವಾಗಿ ಗಳಿಸಿದುದಾಗಿಲ್ಲ.</p>.<p>ಎಲ್ಲ ಪಕ್ಷಗಳವರೂ ಒಮ್ಮತದ ಆಯ್ಕೆ ಎನ್ನುವ ನೆಪ ಹೇಳುತ್ತಾರೆ. ಈ ಒಮ್ಮತಕ್ಕೆ ಮುನ್ನವಾದರೂ ಕನಿಷ್ಠ ಇಬ್ಬರು ಸ್ಪರ್ಧಿಗಳು ಇರಬೇಕಲ್ಲ; ಇರುತ್ತಾರೆ. ಒಬ್ಬನನ್ನು ಹೇಗೋ ಏನೋ ಆಮಿಷವೊಡ್ಡಿ ಪುಸಲಾಯಿಸಿ ಹಿಂದೆಗೆಯುವಂತೆ ಮಾಡಿ, ಒಮ್ಮತ ಸಾಧನೆ ಎಂದು ಬೀಗುವ ಪರಿಪಾಟ ಎಲ್ಲ ಪಕ್ಷಗಳಲ್ಲೂ ಇದೆ. ಜಾತಿ, ಮಠ, ವೋಟ್ ಬ್ಯಾಂಕ್, ಹಣ, ಹೆಂಡ, ಇನ್ನೂ ಏನೇನೋ ಯಾವ್ಯಾವುದೋ ಅಪಸವ್ಯಗಳ ಪ್ರಭಾವ ಬೇರೆ. ಈ ಉಪಕರಣಗಳಿಲ್ಲದೆ ಚುನಾವಣೆಗಳು ಈ ದೇಶದಲ್ಲಿ ಅಸಾಧ್ಯ.</p>.<p>‘ಪ್ರಜಾಪ್ರಭುತ್ವ ಎಲ್ಲಿದೆ ಸ್ವಾಮೀ?’ ಎಂದು ಕಲ್ಪನೆಯ ಆದರ್ಶದ ನೆಲೆಯಲ್ಲಿ ಸುಮ್ಮನೆ ತೊಳಲುವುದಕ್ಕಿಂತ, ಆಯ್ಕೆ ಮಾಡುವುದಷ್ಟೇ ನಮಗೆ, ಅಂದರೆ ಪ್ರಜೆಗಳಿಗೆ ಇರುವ ಅವಕಾಶ. ಐದು ವರ್ಷಗಳವರೆಗೆ ಕಮ್ ಕಿಮ್ ಎನ್ನದೇ ಸುಮ್ಮಗಿರುತ್ತ ಮತ್ತೊಮ್ಮೆ ಆಯ್ಕೆಯ ಅವಕಾಶಕ್ಕಾಗಿ ಕಾಯುವುದೇ ನಮ್ಮಲ್ಲಿನ ಪ್ರಜಾಪ್ರಭುತ್ವ. ಪ್ರಜೆಗಳೂ ಈಗಾಗಲೇ ಈ ದುರವಸ್ಥೆಯ ಪದ್ಧತಿಗೆ ಅನಿವಾರ್ಯವಾಗಿ ತಮ್ಮನ್ನು ಹೊಂದಿಸಿಕೊಂಡಿದ್ದಾರೆ. ಹೀಗಿರುವಾಗ ಎಲ್ಲಿಯ ನೆಲ, ಏನು ಹದ, ಯಾವುದು ಬೀಜ? ಬಿತ್ತುವವರು ಎಲ್ಲಿದ್ದಾರೆ?</p>.<p><strong>-ಸಾಮಗ ದತ್ತಾತ್ರಿ,ಬೆಂಗಳೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>