ಲಿಂಬಾ ರಾಮ್ ಅವರಿಂದ ಇತ್ತೀಚಿನ ಪ್ರತಿಭೆ ದೀಪಿಕಾ ಕುಮಾರಿಯವರವರೆಗೂ ಒಲಿಂಪಿಕ್ಸ್ ಪದಕದ ವಿಷಯದಲ್ಲಿ ಭಾರತೀಯರಿಗೆ ಭ್ರಮನಿರಸನವಾಗುತ್ತಿದೆ. ಧನುರ್ವಿದ್ಯೆಯಲ್ಲಿ ರಾಮ, ಅರ್ಜುನನ ಸ್ಫೂರ್ತಿಯಿಂದ ವಿಶ್ವಗುರುವಾಗಬೇಕಿದ್ದ ಭಾರತವು ಹೀಗೆ ವಿಫಲವಾಗುತ್ತಿರುವುದಕ್ಕೆ ರಾಷ್ಟ್ರೀಯ ಬಿಲ್ಲುಗಾರಿಕಾ ಸಂಸ್ಥೆ ಆತ್ಮವಿಮರ್ಶೆ ಮಾಡಿಕೊಂಡು, ಭವಿಷ್ಯದಲ್ಲಿ ಪದಕದ ಕೊರತೆ ನೀಗಿಸಲು ಪ್ರಯತ್ನಿಸಲಿ.