ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ನಿರ್ಗತಿಕರ ಯೋಚನೆ ಬರಲಿಲ್ಲವೇ?

Last Updated 2 ಮೇ 2021, 20:00 IST
ಅಕ್ಷರ ಗಾತ್ರ

ಭಿಕ್ಷಾಟನೆ ಮಾಡುವ ಮಕ್ಕಳು ಲಾಕ್‌ಡೌನ್‌ನಿಂದಾಗಿ ಹಸಿವಿನಿಂದ ಕಂಗೆಟ್ಟು, ಜನರು ಕುಡಿದು ಬಿಸಾಡಿದ್ದ ಎಳನೀರಿನ ಕಾಯಿಗಳನ್ನು ಆಯ್ದು ತಿನ್ನುತ್ತಿದ್ದ ಅಮಾನವೀಯ ಸುದ್ದಿಯನ್ನು (ಪ್ರ.ವಾ., ಏ. 30) ಓದಿ ಮನಸ್ಸಿಗೆ ತುಂಬಾ ನೋವಾಯಿತು. ಕೊರೊನಾ ಸೋಂಕನ್ನು ತಡೆಯಲು ಸರ್ಕಾರ 14 ದಿನಗಳ ಲಾಕ್‌ಡೌನ್‌ ಜಾರಿ ಮಾಡಿದೆ. ಈ ಸಮಯದಲ್ಲಿ ಏನು ತೆರೆದಿರುತ್ತದೆ ಏನು ತೆರೆದಿರುವುದಿಲ್ಲ ಎಂಬುದನ್ನು ಸವಿಸ್ತಾರವಾಗಿ ಒಳಗೊಂಡ ಮಾರ್ಗಸೂಚಿ ಸಿದ್ಧಪಡಿಸಿದ ಸರ್ಕಾರಕ್ಕೆ, ರಸ್ತೆ ಬದಿಯ ನಿರ್ಗತಿಕರ ಹಸಿವನ್ನು ನೀಗಿಸುವ ಕುರಿತು ಕಿಂಚಿತ್‌ ಯೋಚನೆಯೂ ಬಾರದಿದ್ದುದು ನೋವಿನ ಸಂಗತಿ.

ಕೋವಿಡ್ ಸೋಂಕಿಗಿಂತ ಹಸಿವಿನಿಂದ ಸಾಯುವುದು ಘೋರವಾದುದು. ಎಲ್ಲರಂತೆ 14 ದಿನಗಳಿಗಾಗುವಷ್ಟು ಆಹಾರ ಅಥವಾ ಹಣವನ್ನು ಸಂಗ್ರಹಿಸುವ ಸಾಮರ್ಥ್ಯ ನಿರ್ಗತಿಕರಲ್ಲಿ ಇರುವುದಿಲ್ಲ. ಅವರು ಹೊಟ್ಟೆ ತುಂಬಿಸಿಕೊಳ್ಳಲು ದಿನವೂ ಹೆಣಗಾಡಬೇಕಾಗಿರುತ್ತದೆ. ಇಂತಹವರ ಹೊಟ್ಟೆ ಮೇಲೆ ಬರೆ ಎಳೆಯದೆ ಸರ್ಕಾರ ಕೂಡಲೇ ನಿರ್ಗತಿಕ ಕೇಂದ್ರಗಳನ್ನು ತೆರೆದು, ಅವರ ಹಸಿವನ್ನು ನೀಗಿಸಲಿ.

ಶ್ರೀಧರ ಎಸ್. ವಾಣಿ,ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT