ಭಿಕ್ಷಾಟನೆ ಮಾಡುವ ಮಕ್ಕಳು ಲಾಕ್ಡೌನ್ನಿಂದಾಗಿ ಹಸಿವಿನಿಂದ ಕಂಗೆಟ್ಟು, ಜನರು ಕುಡಿದು ಬಿಸಾಡಿದ್ದ ಎಳನೀರಿನ ಕಾಯಿಗಳನ್ನು ಆಯ್ದು ತಿನ್ನುತ್ತಿದ್ದ ಅಮಾನವೀಯ ಸುದ್ದಿಯನ್ನು (ಪ್ರ.ವಾ., ಏ. 30) ಓದಿ ಮನಸ್ಸಿಗೆ ತುಂಬಾ ನೋವಾಯಿತು. ಕೊರೊನಾ ಸೋಂಕನ್ನು ತಡೆಯಲು ಸರ್ಕಾರ 14 ದಿನಗಳ ಲಾಕ್ಡೌನ್ ಜಾರಿ ಮಾಡಿದೆ. ಈ ಸಮಯದಲ್ಲಿ ಏನು ತೆರೆದಿರುತ್ತದೆ ಏನು ತೆರೆದಿರುವುದಿಲ್ಲ ಎಂಬುದನ್ನು ಸವಿಸ್ತಾರವಾಗಿ ಒಳಗೊಂಡ ಮಾರ್ಗಸೂಚಿ ಸಿದ್ಧಪಡಿಸಿದ ಸರ್ಕಾರಕ್ಕೆ, ರಸ್ತೆ ಬದಿಯ ನಿರ್ಗತಿಕರ ಹಸಿವನ್ನು ನೀಗಿಸುವ ಕುರಿತು ಕಿಂಚಿತ್ ಯೋಚನೆಯೂ ಬಾರದಿದ್ದುದು ನೋವಿನ ಸಂಗತಿ.