ವಿರೋಧ ಪಕ್ಷಗಳು ಆಪಾದಿಸುತ್ತಿರುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ಇರುವುದೇ ಬೇಡವಾದವರನ್ನು ಬಂಧಿಸಲು ಎಂಬಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಆದಾಯ ತೆರಿಗೆ, ತನಿಖಾ ಸಂಸ್ಥೆಗಳನ್ನು ಸಂದರ್ಭೋಚಿತವಾಗಿ ಬಳಸಿಕೊಂಡು ವಿರೋಧಿಗಳ ಬಾಯಿ ಮುಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಎಂಬ ಆರೋಪದಲ್ಲಿ ಹುರುಳಿದೆ ಎನ್ನುವ ಬಲವಾದ ಅಭಿಪ್ರಾಯ ಜನಸಾಮಾನ್ಯರಲ್ಲಿ ಮೂಡುತ್ತಿದೆ. ರಾಜಕೀಯ ವ್ಯವಸ್ಥೆಯಲ್ಲಿ ಕಾಲೆಳೆಯುವ, ಟೀಕಿಸುವ, ವಿರೋಧಿಸುವ ಪ್ರಕ್ರಿಯೆ ಅತಿ ಸಹಜ. ಹಾಗೆಂದು ಅಧಿಕಾರ ದುರ್ಬಳಕೆ ಅಸಮರ್ಥನೀಯ, ಅನಪೇಕ್ಷಣೀಯ.
–ಚನ್ನು ಹಿರೇಮಠ, ರಾಣೆಬೆನ್ನೂರು