ಬೆಂಗಳೂರು– ಮೈಸೂರು ದಶಪಥ ಹೆದ್ದಾರಿಯ ಕಾರಣದಿಂದ ಚನ್ನಪಟ್ಟಣದ ಗೊಂಬೆ ಉದ್ಯಮಕ್ಕೆ ಹೊಡೆತ ಬಿದ್ದಿದೆ ಎಂದು ವರದಿಯಾಗಿದೆ. ಇದು, ಈ ಹೆದ್ದಾರಿಯ ಕಾರಣದಿಂದ ಬಿಡದಿಯ ತಟ್ಟೆ ಇಡ್ಲಿ ಹೋಟೆಲ್ ಮಾಲೀಕರು ಎದುರಿಸುತ್ತಿರುವ ಸಮಸ್ಯೆಯ ಇನ್ನೊಂದು ಮುಖ ಎನ್ನಬಹುದು. ತಂತ್ರಜ್ಞಾನವನ್ನು ಬಳಸಿಕೊಂಡು, ಇ-ಕಾಮರ್ಸ್ ಹೆಸರಿನಲ್ಲಿ ವ್ಯಾಪಾರಿಗಳು ಗ್ರಾಹಕರ ಮನೆ ಬಾಗಿಲಿಗೆ ತಲುಪುತ್ತಿದ್ದಾರೆ. ಆದರೆ ಚನ್ನಪಟ್ಟಣದ ಗೊಂಬೆ ತಯಾರಕರು ಇನ್ನೂ ಹಳೆಯ ವ್ಯಾಪಾರ ಸೂತ್ರಗಳಿಗೆ ಜೋತುಬಿದ್ದು, ಅಂಗಡಿ ಬಾಗಿಲಿಗೆ ಬಂದು ಕೊಳ್ಳುವ ಗ್ರಾಹಕರನ್ನೇ ನಂಬಿ ಉದ್ಯಮ ನಡೆಸುತ್ತಿರುವುದು ಅವರಲ್ಲಿನ ದೂರದೃಷ್ಟಿಯ ಕೊರತೆಯನ್ನು ತೋರಿಸುತ್ತದೆ.