ಹೌದು, ಸಂಚಾರ ಮತ್ತು ಆಹಾರ ಎರಡೂ ದುಬಾರಿಯಾಗಿದ್ದು, ಜನರ ಜೀವನ ಜರ್ಜರಿತಗೊಂಡಿರುವುದು
ನಿಜ. ಇವಿಷ್ಟೇ ಅಲ್ಲದೆ ಎಲ್ಲ ಪದಾರ್ಥಗಳೂ ವಿಪರೀತ ಎಂಬಂತೆ ಬೆಲೆ ಏರಿಕೆ ಕಂಡಿವೆ. ಇದಕ್ಕೆ ಇಂಧನದ ಬೆಲೆ ಏರಿಕೆಯೇ ಮುಖ್ಯ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಮೂಲ ಕಾರಣವಾದ ಇಂಧನದ ಬೆಲೆ ಈ ಮೊದಲಿನಂತೆಯೇ ಸರ್ಕಾರದ ಅಡಿಯಲ್ಲೇ ಇರುವಂತೆ, ಅಂದರೆ ಸಬ್ಸಿಡಿ ಕೊಡುವ ಮೂಲಕ ನಿಯಂತ್ರಿಸಿದರೆ ಇಂತಹ ಅಕಾಲಿಕ ಬೆಲೆ ಏರಿಕೆಯನ್ನು ತಡೆಗಟ್ಟಬಹುದಾಗಿದೆ. ಆರು ತಿಂಗಳಿಗೊಮ್ಮೆ ದರ ಪರಿಷ್ಕರಿಸಬಹುದು. ಕೇಂದ್ರ ಸರ್ಕಾರ ಈ ಕುರಿತು ಶೀಘ್ರವೇ ಚಿಂತಿಸಲಿ.