ಹಳ್ಳಿ-ಹಳ್ಳಿಗಳಲ್ಲೂ ಕೆರೆ-ಕಟ್ಟೆ, ರಾಜಕಾಲುವೆ, ಸರ್ಕಾರಿ ಶಾಲಾ– ಕಾಲೇಜು ಜಾಗ, ರಸ್ತೆ- ಉದ್ಯಾನ ಹಾಗೂ ಸರ್ಕಾರಕ್ಕೆ ಸೇರಿದ ಇತರ ಖಾಲಿ ಜಾಗಗಳನ್ನು ಎಗ್ಗಿಲ್ಲದೆ ಒತ್ತುವರಿ ಮಾಡಿರುವ ಪ್ರಕರಣಗಳಿಗೇನೂ ಕೊರತೆಯಿಲ್ಲ. ಇಂಥದ್ದರ ವಿರುದ್ಧ ದನಿಯೆತ್ತುವವರನ್ನೇ ಮಟ್ಟ ಹಾಕುವ ಮಟ್ಟಕ್ಕೆ ‘ಭೂಮಿ ನುಂಗಣ್ಣ’ರ ದುಷ್ಟಕೂಟ ಪ್ರಬಲವಾಗಿದೆ. ಇಂಥ ವಿಷಮ ಸನ್ನಿವೇಶದಲ್ಲೂ ದಿಟ್ಟ ಕ್ರಮ ಕೈಗೊಂಡಿರುವುದು ಅಭಿನಂದನೀಯ. ಪ್ರತೀ ಜಿಲ್ಲೆ-ತಾಲ್ಲೂಕಿನಲ್ಲೂ ಸರ್ಕಾರಿ ಅಧಿಕಾರಿಗಳು ಹೀಗೆ ದಿಟ್ಟ ಕ್ರಮ ಜರುಗಿಸಿದರೆ, ಅದೆಷ್ಟು ಕೋಟಿ ಮೌಲ್ಯದ ಸರ್ಕಾರಿ ಜಮೀನು ಪತ್ತೆ ಆದೀತೋ?!