ಪ್ರಧಾನಿ ಇಡೀ ರಾಷ್ಟ್ರವನ್ನು ಉದ್ದೇಶಿಸಿ, ‘ಸುಳ್ಳು ಸುದ್ದಿಗಳನ್ನು ಹರಡಬೇಡಿ’ ಎಂದು ಭಾವಪೂರ್ಣವಾಗಿ ಕೋರುತ್ತಾರೆ; ಸುಳ್ಳು ಸುದ್ದಿ ಕುರಿತಂತೆ ಮಾಧ್ಯಮದವರನ್ನು ಹಾಗೂ ಓದುಗರನ್ನು ಮುಖ್ಯಮಂತ್ರಿ ಮತ್ತೆ ಮತ್ತೆ ಎಚ್ಚರಿಸಿದ್ದಾರೆ. ಆದರೂ ವಾಟ್ಸ್ಆ್ಯಪ್ ವಿ.ವಿ.ಯ ಪದವೀಧರರು, ಯಾರು ಏನೇ ಹೇಳಲಿ, ಕೊರೊನಾ ವೈರಸ್ ಇರಲಿ, ಎಚ್ಐವಿ ಇರಲಿ ಪ್ರತಿದಿನವೂ ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ, ಅವುಗಳನ್ನು ನೂರಾರು ಜನರಿಗೆ ತಲುಪಿಸಿ, ಅವು ವೈರಲ್ ಆಗುವಂತೆ ಕಾರ್ಯತತ್ಪರರಾಗಿದ್ದಾರೆ.