ಮಾನವ– ಪ್ರಾಣಿ ಸಂಘರ್ಷ ತಪ್ಪಿಸಲು 9 ಆನೆಗಳಿಗೆ ರೇಡಿಯೊ ಕಾಲರ್ ಅಳವಡಿಸಲಾಗಿದೆ ಎಂದು ಅರಣ್ಯ ಸಚಿವರು ತಿಳಿಸಿದ್ದಾರೆ (ಪ್ರ.ವಾ., ಮಾರ್ಚ್ 13). ಆನೆಗಳು ನಾಡಿನ ಬಳಿ ಬರುತ್ತಿದ್ದಂತೆಯೇ ಸ್ಥಳೀಯರಿಗೆ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗೆಈ ಕಾಲರ್ಗಳು ಎಸ್ಎಂಎಸ್ ಮೂಲಕ ಮಾಹಿತಿ ನೀಡುತ್ತವೆ. ಆದರೆ ಆನೆಗಳಿಗೆ ಕಾಲರ್ ತೊಡಿಸುವಂತೆಯೇ ಕಾಡಿನಲ್ಲಿ ಮರಗಳನ್ನು ಕಡಿಯುವ, ಗಣಿಗಾರಿಕೆ, ಮರಳು ಮಾಫಿಯಾ, ಕಳ್ಳಬೇಟೆ, ಒತ್ತುವರಿ ಮುಂತಾದ ಅಕ್ರಮಗಳನ್ನು ಎಸಗುತ್ತಿರುವವರಿಗೂ ಇಂತಹ ಕಾಲರ್ ತೊಡಿಸುವಂತಿದ್ದರೆ ಒಳ್ಳೆಯದಿತ್ತು.