<p>ಮಂಡ್ಯ ಜಿಲ್ಲೆಯ ಬೆಲ್ಲಕ್ಕೆ ಅದರದೇ ಆದ ಮಹತ್ವವಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ರೈತರು ಇರುವುದರಿಂದ ಸುಮಾರು ಹತ್ತು ವರ್ಷಗಳ ಹಿಂದೆ ಪ್ರತೀ ಹಳ್ಳಿಯಲ್ಲೂ ಆಲೆಮನೆ ಅಥವಾ ಗಾಣಗಳಲ್ಲಿ ರೈತರು ಉತ್ತಮ ಗುಣಮಟ್ಟದ ಬೆಲ್ಲವನ್ನು ಉತ್ಪಾದಿಸುತ್ತಿದ್ದರು. ಒಂದು ಕಾಲದಲ್ಲಿ ಮಂಡ್ಯ ಜಿಲ್ಲೆಯ ಬೆಲ್ಲಕ್ಕೆ ತುಂಬಾ ಬೇಡಿಕೆಯಿತ್ತು. ಗುಜರಾತ್, ಮಹಾರಾಷ್ಟ್ರ, ಕೇರಳ ಮುಂತಾದ ರಾಜ್ಯಗಳಿಗೆ ಜಿಲ್ಲೆಯಿಂದ ಬೆಲ್ಲ ಹೋಗುತ್ತಿತ್ತು.</p>.<p>ಗ್ರಾಮೀಣ ಪ್ರದೇಶದಲ್ಲಿನ ಗಾಣ ಅಥವಾ ಆಲೆಮನೆ ಮಾಲೀಕರು ಕಬ್ಬಿನ ಗಾಣ ನಿರ್ವಹಣೆಯ ಕಷ್ಟ ಹಾಗೂ ಕೆಲಸಗಾರರ ಕೊರತೆಯ ನೆಲೆಯಲ್ಲಿ ದಿನೇದಿನೇ ಅದನ್ನು ಹೊರರಾಜ್ಯದ ಉದ್ಯಮಿಗಳಿಗೆ ಅಥವಾ ಕೆಲಸ ಮಾಡುವ ಕಾರ್ಮಿಕರಿಗೆ ಬಾಡಿಗೆಗೆ ಕೊಡುತ್ತಾ ಬಂದಿದ್ದಾರೆ. ಹೀಗೆ ಗಾಣವನ್ನು ಬಾಡಿಗೆಗೆ ಪಡೆದವರಲ್ಲಿ ಕೆಲವರು ಹಣದ ಆಸೆಯಿಂದ ರಾಸಾಯನಿಕ ಮಿಶ್ರಿತ ಬೆಲ್ಲವನ್ನು ತಯಾರಿಸಿ ಮಾರುಕಟ್ಟೆಗೆ ಕಳಿಸುವ ಕೆಲಸ ಮಾಡುತ್ತಾರೆ. ಇದು ಮಂಡ್ಯ ಬೆಲ್ಲದ ಹೆಸರು ಹಾಳಾಗಲು ಪ್ರಮುಖ ಕಾರಣವಾಗಿದ್ದು, ಮಂಡ್ಯ ಬೆಲ್ಲಕ್ಕೆ ಅಂತರರಾಜ್ಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಗ್ಗಲು ಕಾರಣವಾಗಿದೆ. ಜಿಲ್ಲಾಡಳಿತ ಹಾಗೂ ಸರ್ಕಾರ ಈ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು. ಮಂಡ್ಯ ಜಿಲ್ಲೆಯ ಬೆಲ್ಲಕ್ಕೆ ಇರುವ ಅದರದೇ ಆದ ಬೆಲೆ ಮತ್ತು ಗೌರವವನ್ನು ಉಳಿಸಬೇಕು. ಕಳಪೆ ಬೆಲ್ಲ ತಯಾರಕರ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.</p>.<p><em>-ಶ್ರೀನಿವಾಸ್ ಚಕ್ರವರ್ತಿ, ಹೊಳಲು</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಡ್ಯ ಜಿಲ್ಲೆಯ ಬೆಲ್ಲಕ್ಕೆ ಅದರದೇ ಆದ ಮಹತ್ವವಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ರೈತರು ಇರುವುದರಿಂದ ಸುಮಾರು ಹತ್ತು ವರ್ಷಗಳ ಹಿಂದೆ ಪ್ರತೀ ಹಳ್ಳಿಯಲ್ಲೂ ಆಲೆಮನೆ ಅಥವಾ ಗಾಣಗಳಲ್ಲಿ ರೈತರು ಉತ್ತಮ ಗುಣಮಟ್ಟದ ಬೆಲ್ಲವನ್ನು ಉತ್ಪಾದಿಸುತ್ತಿದ್ದರು. ಒಂದು ಕಾಲದಲ್ಲಿ ಮಂಡ್ಯ ಜಿಲ್ಲೆಯ ಬೆಲ್ಲಕ್ಕೆ ತುಂಬಾ ಬೇಡಿಕೆಯಿತ್ತು. ಗುಜರಾತ್, ಮಹಾರಾಷ್ಟ್ರ, ಕೇರಳ ಮುಂತಾದ ರಾಜ್ಯಗಳಿಗೆ ಜಿಲ್ಲೆಯಿಂದ ಬೆಲ್ಲ ಹೋಗುತ್ತಿತ್ತು.</p>.<p>ಗ್ರಾಮೀಣ ಪ್ರದೇಶದಲ್ಲಿನ ಗಾಣ ಅಥವಾ ಆಲೆಮನೆ ಮಾಲೀಕರು ಕಬ್ಬಿನ ಗಾಣ ನಿರ್ವಹಣೆಯ ಕಷ್ಟ ಹಾಗೂ ಕೆಲಸಗಾರರ ಕೊರತೆಯ ನೆಲೆಯಲ್ಲಿ ದಿನೇದಿನೇ ಅದನ್ನು ಹೊರರಾಜ್ಯದ ಉದ್ಯಮಿಗಳಿಗೆ ಅಥವಾ ಕೆಲಸ ಮಾಡುವ ಕಾರ್ಮಿಕರಿಗೆ ಬಾಡಿಗೆಗೆ ಕೊಡುತ್ತಾ ಬಂದಿದ್ದಾರೆ. ಹೀಗೆ ಗಾಣವನ್ನು ಬಾಡಿಗೆಗೆ ಪಡೆದವರಲ್ಲಿ ಕೆಲವರು ಹಣದ ಆಸೆಯಿಂದ ರಾಸಾಯನಿಕ ಮಿಶ್ರಿತ ಬೆಲ್ಲವನ್ನು ತಯಾರಿಸಿ ಮಾರುಕಟ್ಟೆಗೆ ಕಳಿಸುವ ಕೆಲಸ ಮಾಡುತ್ತಾರೆ. ಇದು ಮಂಡ್ಯ ಬೆಲ್ಲದ ಹೆಸರು ಹಾಳಾಗಲು ಪ್ರಮುಖ ಕಾರಣವಾಗಿದ್ದು, ಮಂಡ್ಯ ಬೆಲ್ಲಕ್ಕೆ ಅಂತರರಾಜ್ಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಗ್ಗಲು ಕಾರಣವಾಗಿದೆ. ಜಿಲ್ಲಾಡಳಿತ ಹಾಗೂ ಸರ್ಕಾರ ಈ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು. ಮಂಡ್ಯ ಜಿಲ್ಲೆಯ ಬೆಲ್ಲಕ್ಕೆ ಇರುವ ಅದರದೇ ಆದ ಬೆಲೆ ಮತ್ತು ಗೌರವವನ್ನು ಉಳಿಸಬೇಕು. ಕಳಪೆ ಬೆಲ್ಲ ತಯಾರಕರ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.</p>.<p><em>-ಶ್ರೀನಿವಾಸ್ ಚಕ್ರವರ್ತಿ, ಹೊಳಲು</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>