ಕೆಲವು ಟಿ.ವಿ ವಾಹಿನಿಗಳ ಸುದ್ದಿ ಪ್ರಸಾರದ ಸಮಯದಲ್ಲಿ ತೆರೆಯ ಮೇಲೆ ಭಾರತದ ಭೂಪಟಕ್ಕೆ ಸರಪಳಿಯ ಜೊತೆಗೆ ಬೀಗ ಇರುವಂತಹ ಚಿತ್ರ ಹಾಕಲಾಗಿರುತ್ತದೆ. ಭೂಪಟವು ದೇಶಭಕ್ತಿಯ ಸಂಕೇತ. ಸರಪಳಿಗೆ ಬೀಗದ ಪದಕ ಹಾಕಿದ ಭೂಪಟವನ್ನು ನೋಡಲು ಮನಸ್ಸು ಒಪ್ಪುವುದಿಲ್ಲ. ಲಾಕ್ಡೌನ್ ಪದವು ಈ ಮೂರು ತಿಂಗಳಲ್ಲಿ ಎಲ್ಲರಿಗೂ ಅರ್ಥವಾಗಿದೆ. ಹೀಗಾಗಿ, ಅದನ್ನು ಬಿಂಬಿಸುವ ಇಂತಹ ಚಿತ್ರಸಹಿತ ಸುದ್ದಿ ಪ್ರಸಾರ ಮಾಡುವುದನ್ನು ನಿಲ್ಲಿಸಲಿ.
–ಸುಜಾತಾ ಎಂ.ಎಚ್., ಹುಲ್ಲತ್ತಿ, ಸಾಗರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.