ನೂರಾರು ಮೈಲಿಗಳ ದೂರ ಇತರ ಪ್ರಯಾಣಿಕರೊಂದಿಗೆ ದಿನಗಟ್ಟಲೆ ರೈಲಿನಲ್ಲಿ ಬರುವವರಿಗೆ, ಹತ್ತುವಾಗ ಇಲ್ಲದ ಸೋಂಕು ಇಳಿಯುವಾಗ ಹಬ್ಬಿದ್ದರೆ ಅಚ್ಚರಿ ಪಡಬೇಕಿಲ್ಲ. ಹಾಗಾಗಿಯೂ ಕೆಲಸಗಾರರ ಅಗತ್ಯ ಹೆಚ್ಚಾದರೆ, ಕರ್ನಾಟಕದಲ್ಲೇ ಸ್ವಂತ ಊರುಗಳಿಗೆ ಮರಳಿರುವ ಕಾರ್ಮಿಕರನ್ನು ಕರೆಸಿಕೊಳ್ಳಬಹುದು. ಊರಿಗೆ ಮರಳುವ ಸಂದರ್ಭದಲ್ಲಿ ಅವರ ಹೆಸರು, ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಸರ್ಕಾರ ಸಂಗ್ರಹಿಸಿರುವುದರಿಂದ ಈ ಕಾರ್ಯ ಕಷ್ಟವೇನೂ ಆಗದು. ಅಲ್ಲದೆ ಇಂತಹ ಸಂಕಷ್ಟದ ಸಮಯದಲ್ಲಿ ನಮ್ಮ ರಾಜ್ಯದವರನ್ನು ನಿಭಾಯಿಸುವುದು ಸರ್ಕಾರಕ್ಕೆ ಹೆಚ್ಚು ಸುಲಭವಾಗುತ್ತದೆ.