ಬ್ರಿಟಿಷರ ಕಾಲದಲ್ಲಿ ನಡೆದ ಕೊಡಗಿನ ಬಂಡಾಯದ ಕುರಿತು ಅರವಿಂದ ಚೊಕ್ಕಾಡಿ ಅವರು ಬರೆದಿರುವ ಲೇಖನ (ಪ್ರ.ವಾ., ಅ. 30) ಈ ಭಾಗದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಗುಣಾತ್ಮಕ ಅಂಶಗಳನ್ನು ಬೆಳಕಿಗೆ ತರುವಲ್ಲಿ ಯಶಸ್ವಿಯಾಗಿದೆ. ರಾಜ್ಯೋತ್ಸವದ ಸಂದರ್ಭದಲ್ಲಿ ಇಂತಹ ಮಾಹಿತಿ ನೀಡಿರುವುದು ಔಚಿತ್ಯಪೂರ್ಣವಾಗಿದೆ. ಈ ಹೋರಾಟವು ಗಾಂಧೀಜಿ ನೇತೃತ್ವದ ಹೋರಾಟಕ್ಕೆ ಮಾದರಿಯಾಗಿದ್ದ ವಿಷಯ ತಿಳಿದು ಕನ್ನಡಿಗರ ಶೌರ್ಯ, ಸಾಹಸ ಎಷ್ಟಿತ್ತು ಎನ್ನುವುದು ನಮಗೆ ಅರಿವಾಗುತ್ತದೆ.