ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರು ಜನಸೇವಕರು, ಹೌದಲ್ಲವೇ?

Last Updated 26 ಡಿಸೆಂಬರ್ 2018, 19:59 IST
ಅಕ್ಷರ ಗಾತ್ರ

ಸಂಸದರು, ಶಾಸಕರು ಯಾವ ಪಕ್ಷದವರೇ ಆಗಿರಲಿ, ಸರ್ಕಾರವು ಪ್ರತೀ ಕ್ಷೇತ್ರದ ಅಭಿವೃದ್ಧಿಗೆಂದು ಹಲವು ಕೋಟಿ ರೂಪಾಯಿ ಅನುದಾನ ನೀಡುತ್ತದೆ. ಅನೇಕ ಜನಪ್ರತಿನಿಧಿಗಳು ಈ ಹಣವನ್ನು ಸರಿಯಾಗಿ ಬಳಸದ ಕಾರಣ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಈ ಹಣ ಕೊಳೆಯುತ್ತಿದೆ ಎಂದು ಈಚೆಗೆ ವರದಿಯಾಗಿದೆ. ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಬೊಬ್ಬೆ ಹೊಡೆಯುವವರಿಗೆ, ಕೊಟ್ಟ ಹಣವನ್ನು ಬಳಸಿಕೊಳ್ಳಲು ಆಸಕ್ತಿ ಏಕಿಲ್ಲ ಎಂಬುದು ಅರ್ಥವಾಗದ ವಿಚಾರ.

ಪರಿಸ್ಥಿತಿ ಹೀಗಿದ್ದರೂ ‘ಕ್ಷೇತ್ರಾಭಿವೃದ್ಧಿ ನಿಧಿಯ ಮೊತ್ತವನ್ನು ಹೆಚ್ಚಿಸಬೇಕು’ ಎಂದು ಕೆಲವು ಜನಪ್ರತಿನಿಧಿಗಳು ಕೋರಿರುವುದು ವರದಿಯಾಗಿದೆ. ನಮ್ಮ ಮುಖ್ಯಮಂತ್ರಿ ಈ ಬೇಡಿಕೆಗೆ ಕಿಮ್ಮತ್ತು ಕೊಡಬಾರದು. ಜನರ ತೆರಿಗೆಯ ಹಣ ಪೋಲಾಗದಂತೆ ಎಚ್ಚರಿಕೆ ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT