ಸಂಸದರು, ಶಾಸಕರು ಯಾವ ಪಕ್ಷದವರೇ ಆಗಿರಲಿ, ಸರ್ಕಾರವು ಪ್ರತೀ ಕ್ಷೇತ್ರದ ಅಭಿವೃದ್ಧಿಗೆಂದು ಹಲವು ಕೋಟಿ ರೂಪಾಯಿ ಅನುದಾನ ನೀಡುತ್ತದೆ. ಅನೇಕ ಜನಪ್ರತಿನಿಧಿಗಳು ಈ ಹಣವನ್ನು ಸರಿಯಾಗಿ ಬಳಸದ ಕಾರಣ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಈ ಹಣ ಕೊಳೆಯುತ್ತಿದೆ ಎಂದು ಈಚೆಗೆ ವರದಿಯಾಗಿದೆ. ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಬೊಬ್ಬೆ ಹೊಡೆಯುವವರಿಗೆ, ಕೊಟ್ಟ ಹಣವನ್ನು ಬಳಸಿಕೊಳ್ಳಲು ಆಸಕ್ತಿ ಏಕಿಲ್ಲ ಎಂಬುದು ಅರ್ಥವಾಗದ ವಿಚಾರ.