ರಾಷ್ಟ್ರೀಯ ಹೆದ್ದಾರಿ 167, ಭಾರತದಲ್ಲಿ ಮಹತ್ವದ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಇದು ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಸುಮಾರು 485 ಕಿಲೊಮೀಟರ್ನಷ್ಟು ವಿಸ್ತಾರ ಹೊಂದಿದ್ದು, ಇದು ಹಾದು ಹೋಗುವ ಪ್ರದೇಶವು ಬರೀ ಬರಡು ಭೂಮಿಯಿಂದ ಕೂಡಿದೆ. ಆದ್ದರಿಂದ ಈ ಹೆದ್ದಾರಿಯನ್ನು ಗ್ರೀನ್ ಹೈವೆಯಾಗಿ ಪರಿವರ್ತಿಸಿದಲ್ಲಿ ವಾತಾವರಣದಲ್ಲಿ ಕೊಂಚ ಮಟ್ಟಿಗೆ ಸುಧಾರಣೆ ಆಗುತ್ತದೆ ಎಂಬ ಕಾರಣಕ್ಕೆ ಗ್ರೀನ್ ಹೈವೆ ನೀತಿಯಡಿ ಇದನ್ನು ಮೇಲ್ದರ್ಜೆಗೆ ಏರಿಸುವುದಾಗಿ ಕೇಂದ್ರದ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದರು.