ಗೌರಿ-ಗಣೇಶ ಹಬ್ಬದ ಆಚರಣೆಗೆ ಕೋವಿಡ್ ನಿಯಮ ಪಾಲನೆ ಹಾಗೂ ಷರತ್ತುಬದ್ಧ ಅನುಮತಿ ನೀಡಲು ಸರ್ಕಾರ ತೀರ್ಮಾನಿಸಿರುವುದು (ಪ್ರ.ವಾ., ಸೆ. 6) ಒಳ್ಳೆಯದು. ಆದರೆ, ಕೋವಿಡ್ ಸುರಕ್ಷತೆಯಷ್ಟೇ ವಿದ್ಯುತ್, ನೀರಿನಂಥ ಅನ್ಯ ಕಾರಣಗಳಿಂದ ಅವಘಡಗಳು ಸಂಭವಿಸುವ ಅನೇಕ ಉದಾಹರಣೆಗಳಿದ್ದು, ಅವುಗಳನ್ನು ಕೂಡ ತಪ್ಪಿಸುವ ಸಲುವಾಗಿ ಆಲೋಚಿಸುವುದು ಮುಖ್ಯವಾದ ಅಂಶ.