ನಮ್ಮ ಈಗಿನ ಜನಪ್ರತಿನಿಧಿಗಳ ಗುಣಮಟ್ಟ, ಸಂವೇದನಾಶೀಲತೆ, ಪ್ರಾಶಸ್ತ್ಯಗಳನ್ನು ನೋಡಿದರೆ ಅವರ ಮೇಲೆ ‘ಒತ್ತಡ ಹೇರಲು’ ಸಾಧ್ಯವೇ ಎಂಬ ಸಂಶಯ ಹುಟ್ಟುತ್ತದೆ. ಕೇರಳ ಹಾಗೂ ಕರಾವಳಿ ಕರ್ನಾಟಕದ ಜಿಲ್ಲೆಗಳಿಗೆ ಹೋಲಿಕೆ ಇದೆ. ಹಾಗೆಯೇ ನಮ್ಮ ಮಲೆನಾಡು ಹಾಗೂ ಕೇರಳದ ಒಳಭಾಗದ ಗುಡ್ಡಪ್ರದೇಶಗಳಲ್ಲಿ ಕೆಲವು ಸಮಾನ ಅಂಶಗಳಿವೆ. ಈ ವರ್ಷ ಮುಂಗಾರು ಹಿಂದೆ ಸರಿಯುವುದು ತಡವಾಗಿದೆ, ಹಿಂಗಾರು ಸಮೀಪಿಸುತ್ತಿದೆ. ಎರಡು- ಮೂರು ಲೋ ಪ್ರೆಶರ್ ಸಿಸ್ಟಮ್ಗಳ ಮಧ್ಯೆ ಒಮ್ಮೆಗೇ ಸಿಲುಕಿದಾಗ ಎಲ್ಲ ಅಸ್ತವ್ಯಸ್ತ ಆಗುತ್ತದೆ. ಹವಾಮಾನ ಬದಲಾವಣೆ ಬರೀ ಮಳೆಯ ಮೇಲೆ ಪ್ರಭಾವ ಬೀರುವುದಿಲ್ಲ, ತಾಪಮಾನ ಮತ್ತು ಅದರಿಂದಾಗಿ ಕೃಷಿ, ಮೀನುಗಾರಿಕೆಯಂತಹ ಜನರ ಜೀವನೋಪಾಯ ಚಟುವಟಿಕೆಗಳ ಮೇಲೂ ದುಷ್ಪರಿಣಾಮ ಬೀರಬಹುದು.