ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಕ್ಕಾಗಿ ಅನಿವಾರ್ಯ ಕಸರತ್ತು

Last Updated 1 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಆಳುವವರು ಮಠಾಧೀಶರ ಕಾಲಿಗೆ ಬೀಳುವುದನ್ನು ಆಕ್ಷೇಪಿಸಿರುವ ರವೀಂದ್ರ ಭಟ್ಟ ಅವರ ಲೇಖನ (ಪ್ರ.ವಾ., ಆ. 31) ರಾಜ್ಯದ ರಾಜಕಾರಣ ಹೇಗಿದೆ ಎಂಬುದರ ದಿಕ್ಸೂಚಿ. ಇದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮಾತ್ರ ಅನ್ವಯಿಸುವಂಥದ್ದಲ್ಲ. ಅವರು ಹಾಗೆ ಮಠಾಧೀಶರ ಕಾಲಿಗೆ ಬೀಳದಿದ್ದರೆ ಮತದಾರ ಭಕ್ತರು ಉದ್ಧಟತನ ಎಂದು ಭಾವಿಸುವ ಸ್ಥಿತಿ ಇಂದು ಇದೆ. ಜನಸಾಮಾನ್ಯರ ತೆರಿಗೆ ಹಣವನ್ನು ಜಾತಿಕೇಂದ್ರಿತ ಮಠಗಳಿಗೆ ಹಂಚುವುದು ದುರದೃಷ್ಟಕರ. ಅಧಿಕಾರ ಉಳಿಸಿಕೊಳ್ಳಲು, ಸ್ವಾಮೀಜಿಗಳಿಗೆ ಕವರ್ ಹಂಚಿದ್ದನ್ನೂ ಕಂಡಿದ್ದೇವೆ. ಮಠಗಳ ಸ್ವಾಮೀಜಿಗಳು ಯಾವ ಜಾತಿಗೆ ಎಷ್ಟು ಮೀಸಲಾತಿ ಇರಬೇಕೆಂದು ನಿರ್ಧರಿಸುವ ಮಟ್ಟಿಗೆ ಈ ಸ್ಥಿತಿ ತಲುಪಿರುವುದು ದುರದೃಷ್ಟಕರ.

-ಅತ್ತಿಹಳ್ಳಿ ದೇವರಾಜ್, ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT