ಆಳುವವರು ಮಠಾಧೀಶರ ಕಾಲಿಗೆ ಬೀಳುವುದನ್ನು ಆಕ್ಷೇಪಿಸಿರುವ ರವೀಂದ್ರ ಭಟ್ಟ ಅವರ ಲೇಖನ (ಪ್ರ.ವಾ., ಆ. 31) ರಾಜ್ಯದ ರಾಜಕಾರಣ ಹೇಗಿದೆ ಎಂಬುದರ ದಿಕ್ಸೂಚಿ. ಇದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮಾತ್ರ ಅನ್ವಯಿಸುವಂಥದ್ದಲ್ಲ. ಅವರು ಹಾಗೆ ಮಠಾಧೀಶರ ಕಾಲಿಗೆ ಬೀಳದಿದ್ದರೆ ಮತದಾರ ಭಕ್ತರು ಉದ್ಧಟತನ ಎಂದು ಭಾವಿಸುವ ಸ್ಥಿತಿ ಇಂದು ಇದೆ. ಜನಸಾಮಾನ್ಯರ ತೆರಿಗೆ ಹಣವನ್ನು ಜಾತಿಕೇಂದ್ರಿತ ಮಠಗಳಿಗೆ ಹಂಚುವುದು ದುರದೃಷ್ಟಕರ. ಅಧಿಕಾರ ಉಳಿಸಿಕೊಳ್ಳಲು, ಸ್ವಾಮೀಜಿಗಳಿಗೆ ಕವರ್ ಹಂಚಿದ್ದನ್ನೂ ಕಂಡಿದ್ದೇವೆ. ಮಠಗಳ ಸ್ವಾಮೀಜಿಗಳು ಯಾವ ಜಾತಿಗೆ ಎಷ್ಟು ಮೀಸಲಾತಿ ಇರಬೇಕೆಂದು ನಿರ್ಧರಿಸುವ ಮಟ್ಟಿಗೆ ಈ ಸ್ಥಿತಿ ತಲುಪಿರುವುದು ದುರದೃಷ್ಟಕರ.