‘ಬೀದಿ ಬೀದಿಯಲ್ಲಿ ವಿಷ್ಣು ಪುತ್ಥಳಿ’ ಬೇಡ ಎಂದು ಭಾರತಿ ವಿಷ್ಣುವರ್ಧನ್ ಅವರು ವಿಷ್ಣು ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ (ಪ್ರ.ವಾ., ಡಿ. 31). ಈ ಕರೆಗೆ ಪ್ರೇರಣೆ– ಬೆಂಗಳೂರಿನ ಟೋಲ್ಗೇಟ್ ಬಳಿಯ ವೃತ್ತದಲ್ಲಿದ್ದ ವಿಷ್ಣು ಪ್ರತಿಮೆಯ ಧ್ವಂಸ ಪ್ರಕರಣ. ಪ್ರತಿಮೆ ಸ್ಥಾಪನೆಗೆ ಸ್ಪರ್ಧೆ ನಡೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಭಾರತಿ ಅವರ ಈ ಕರೆಗೆ ಹೆಚ್ಚು ಮಹತ್ವ ಇದೆ. ಪ್ರತಿಮೆ ಸ್ಥಾಪನೆಯ ಮೂಲ ಉದ್ದೇಶ ಹಿನ್ನೆಲೆಗೆ ಸರಿದು, ಕೇವಲ ಪ್ರತಿಷ್ಠೆಗಾಗಿ ಸ್ಥಾಪನೆಯಾಗುತ್ತಿರುವ ಪ್ರತಿಮೆಗಳು ಸಂಘರ್ಷಗಳಿಗೆ ಕಾರಣವಾಗುತ್ತಿರುವುದನ್ನು ನೋಡುತ್ತಿದ್ದೇವೆ.