ಉದ್ಯೋಗದ ಬದಲು ಶಿಕ್ಷಣಕ್ಕಾಗಿ ಒಬಿಸಿ ಪ್ರಮಾಣಪತ್ರ ಕೊಡಿ ಎಂದು ತಹಶೀಲ್ದಾರರನ್ನು ಕೋರಿದರೆ, ನಿಗದಿತ ನಮೂನೆ ಬಿಟ್ಟು, ಶಿಕ್ಷಣಕ್ಕಾಗಿ ಒಬಿಸಿ ಪ್ರಮಾಣಪತ್ರ ನೀಡಲು ನಮಗೆ ಆದೇಶ ಇಲ್ಲ ಎನ್ನುತ್ತಿ
ದ್ದಾರೆ. ಹೋಗಲಿ, ಮೀಸಲಾತಿಗಾಗಿ ಕೇಂದ್ರ ಸರ್ಕಾರದ ಶಿಕ್ಷಣ ಸಂಸ್ಥೆ ನಿರ್ದಿಷ್ಟಪಡಿಸಿದ ನಮೂನೆಯಲ್ಲಾ
ದರೂ ಒಬಿಸಿ ಪ್ರಮಾಣಪತ್ರ ಕೊಡಿ ಎಂದು ಕೋರಿದರೂ ಪ್ರಚಲಿತ ನಮೂನೆ ಬಿಟ್ಟು, ಬೇರೆ ಯಾವುದೇ ಹೊಸ ನಮೂನೆಯಲ್ಲಿ ಒಬಿಸಿ ಪ್ರಮಾಣಪತ್ರ ನೀಡಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಲಾಗುತ್ತಿದೆ. ಇದ ರಿಂದ, ರಾಜ್ಯದ ಹೊರಗೆ, ಕೇಂದ್ರ ಸರ್ಕಾರದ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣದ ಮೀಸಲಾತಿ ಸೌಲಭ್ಯದಿಂದ ವಂಚಿತರಾಗುವ ಪರಿಸ್ಥಿತಿಯು ಕರ್ನಾಟಕದ ಒಬಿಸಿ ವಿದ್ಯಾರ್ಥಿಗಳಿಗೆ ಎದುರಾಗಿದೆ. ಈ ನ್ಯೂನತೆಯನ್ನು ಸರಿಪಡಿಸಲು ಸರ್ಕಾರ ಮುಂದಾಗಬೇಕು.