ವಸ್ತುಸ್ಥಿತಿ ಹೀಗಿರುವಾಗ, ಪಾಕಿಸ್ತಾನದ ಪರಿಸ್ಥಿತಿಯನ್ನು ತನ್ನ ಬದುಕಿನಲ್ಲಿ ಎಂದೂ ಕಂಡರಿಯದ, ಆ ನಿಟ್ಟಿನಲ್ಲಿ ಒಮ್ಮೆಯೂ ಕಾರ್ಯಪ್ರವೃತ್ತಳಾಗದ ಒಬ್ಬ ಯುವತಿ, ಪಾಕಿಸ್ತಾನವನ್ನು ಖಾಲಿ ಶಬ್ದಗಳಲ್ಲಿ ಸ್ತುತಿಸಿದರೆ ಅದನ್ನು ಸುಮ್ಮನೆ ನಿರ್ಲಕ್ಷಿಸುವುದು ಬಿಟ್ಟು ಗಂಭೀರವಾಗಿ ತೆಗೆದುಕೊಳ್ಳುವುದೇ? ದೇಶದ್ರೋಹದ ಕೇಸು ಜಡಿಯುವುದೇ? ಭಾರತದಲ್ಲಿ ಮಾತು ಸೋಲಲು ಕಾರಣ ಇಲ್ಲದಿಲ್ಲ. ಜೈಕಾರ, ಬೈಗುಳಗಳೇ ನಿರ್ಣಾಯಕವಾದಾಗಸ್ತುತಿ–ನಿಂದೆಗಳಾಚೆಗಿನಮಾತು, ಚಿಂತನೆಗಳು ಹಿಂದಕ್ಕೆ ಸರಿದುಬಿಡುತ್ತವೆ.