ನಮ್ಮ ಸಂಸದ ಡಿ.ಕೆ.ಸುರೇಶ್ ಮೊನ್ನೆ ಸಂಸತ್ ಅಧಿವೇಶನಕ್ಕೆ ಸೈಕಲ್ ಮೇಲೆ ಹೋದರೆಂಬ ಸುದ್ದಿ ಓದಿ ನನ್ನಂಥ ಅನೇಕ ಪರಿಸರಪ್ರೇಮಿಗಳಿಗೆ ತುಂಬ ಸಂತೋಷವಾಗಿದೆ. ಪೆಟ್ರೋಲ್, ಡೀಸೆಲ್ ಸುಡುವುದರಿಂದ ಇಡೀ ಭೂಮಿಯ ತಾಪಮಾನ ಏರುತ್ತಿದೆ; ನೆರೆ ಹಾವಳಿ, ಸುಂಟರಗಾಳಿ, ತೀವ್ರ ಬರಗಾಲ, ಕಾಡಿಗೆ ಬೆಂಕಿ, ಭೂಕುಸಿತಗಳಂಥ ಸಂಕಟಗಳ ವರ್ತಮಾನ ಎಲ್ಲ ದೇಶಗಳಿಂದ ದಿನೇ ದಿನೇ ಬರುತ್ತಿದೆ. ಇದರ ಕುರಿತು ಜನಜಾಗೃತಿ ಮೂಡಿಸಲೆಂದು ಬ್ರಿಟನ್, ಕೆನಡಾ, ನಾರ್ವೆ ದೇಶಗಳ ಪ್ರಧಾನಮಂತ್ರಿಗಳು ಅದೆಷ್ಟೊ ಬಾರಿ ಸೈಕಲ್ ಸವಾರಿ ಮಾಡಿದ್ದಾರೆ.