ಜನರು ಪ್ರತಿದಿನ ಬ್ಯಾಂಕುಗಳಲ್ಲಿ ಪಾಳಿ ಹಚ್ಚಿ ನಿಲ್ಲೋದು ಮಾಮೂಲಾಗಿದೆ. ಹೊಟ್ಟೆಗೆ ತಣ್ಣೀರಿನ ಬಟ್ಟೆ ಕಟ್ಟಿಕೊಳ್ಳುತ್ತಿದ್ದಾರೆ. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ತಾರಕಕ್ಕೇರಿದೆ. ಹೆಜ್ಜೆ ಹೆಜ್ಜೆಗೆ ಒತ್ತಡ. ಪೊಲೀಸ್ ಠಾಣೆ, ಕೋರ್ಟು, ಜೈಲು, ಆಸ್ಪತ್ರೆಗಳ ಸಂಖ್ಯೆ ಹೆಚ್ಚಾದಂತೆ ಆಳರಸರ ಸಂಖ್ಯೆಯೂ ಏರುತ್ತಿದೆ. ಕಂಬಳಿಯಲ್ಲಿ ಕಲ್ಲು ಕಟ್ಟಿ ಬಡವರ ಬದುಕಿಗೆ ಹೊಡೆತ ಹಾಕುತ್ತಿದ್ದಾರೆ. ಒಟ್ಟಾರೆ, ಜೆ.ಪಿ. ಮಾದರಿಯ ‘ಸಂಪೂರ್ಣ ಕ್ರಾಂತಿ’ ಈಗ ಮಂತ್ರಿಗಳ ಬುಡಕ್ಕೇ ಬರುತ್ತಲಿದೆ!