ತೆಲಂಗಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಡಿದ ಈ ವಾಗ್ದಾಳಿಯನ್ನು ಪಕ್ಕದ ತಮಿಳುನಾಡು ಭೇಟಿಯ ಸಂದರ್ಭದಲ್ಲಿ ಮಾಡಲಿಲ್ಲವೇಕೆ? ತಮಿಳುನಾಡಿನಲ್ಲೂ ಕುಟುಂಬ ಆಧರಿತ ಪಕ್ಷವೇ ಅಧಿಕಾರದಲ್ಲಿಇದೆಯಲ್ಲವೇ? ಅದನ್ನು ಗಮನಿಸದಿರುವುದು ಜಾಣ ಕುರುಡಲ್ಲವೇ? ‘ಕುಟುಂಬ’ಗಳನ್ನು ಮತದಾರರುಮಾನ್ಯ ಮಾಡಿ ಚುನಾಯಿಸುತ್ತಿರುವಾಗ, ಜನಾದೇಶಕ್ಕೆ ತಲೆ ಬಾಗುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವವರ ಅಭ್ಯಂತರವೇಕೆ? ಕುಟುಂಬ ಆಧರಿತ ಪಕ್ಷಗಳು ದೇಶಕ್ಕೆ ಮಾರಕವಾಗಿದ್ದರೆ ಅದರ ನಿಯಂತ್ರಣಕ್ಕೆ ಕಾನೂನು ತರಬಹುದಲ್ಲವೇ?
-ಎಂ. ಶ್ರೀಧರ ರಾವ್,ಮರಲಹಳ್ಳಿ,ಕೋಲಾರ