‘ಪ್ರಜಾವಾಣಿ’ಯ ಫೋನ್ ಇನ್ ಕಾರ್ಯಕ್ರಮದ ಮೂಲಕ (ಸೆ. 8) ಶಿಕ್ಷಕರ ಬವಣೆ ಆಲಿಸಿದ ಶಿಕ್ಷಣ ಸಚಿವರಿಗೆ ಧನ್ಯವಾದ. ಶಿಕ್ಷಕಸ್ನೇಹಿ ವರ್ಗಾವಣೆ, ವಿದ್ಯಾರ್ಥಿಸ್ನೇಹಿ ವಾತಾವರಣಕ್ಕೆ ಸಂಬಂಧಿಸಿದ ಅವರ ಕಲ್ಪನೆ ಚೆನ್ನಾಗಿದೆ. ಬವಣೆಯನ್ನು ನೀಗಿಸುವ ಕ್ರಮ ಕಾರ್ಯಗತ ಆದಾಗ ಅದಕ್ಕೆ ಬೆಲೆ. ಭ್ರಷ್ಟಾಚಾರವನ್ನು ಯಾರು ಬಂದರೂ ತಡೆಯಲಾಗದು. ಸೇವಾ ಮನೋಭಾವದ ಅರಿವಾದಾಗ ಮಾತ್ರ ಅದು ನಿಲ್ಲುತ್ತದೆ.