ಫ್ಯಾನ್, ಏರ್ಕಂಡೀಷನ್ರಗಳು ಇಲ್ಲದ ಕಚೇರಿಗಳು ಈಗಿನ ದಿನಗಳಲ್ಲಿ ಕಡಿಮೆ. ಇಲ್ಲಿ ಸಾರ್ವಜನಿಕ ವಾಗಿ ವ್ಯಕ್ತವಾಗುವ ಪ್ರಶ್ನೆ ಎಂದರೆ, ಈ ಬೇಸಿಗೆ ಕೇವಲ ರಾಜ್ಯ ಸರ್ಕಾರದ ನೌಕರರಿಗಷ್ಟೇ ಇದೆಯೇ ಎಂಬುದು. ಈ ಜಿಲ್ಲೆಗಳಲ್ಲಿ ಕೆಲಸ ಮಾಡುವ ಕೇಂದ್ರ ಸರ್ಕಾರಿ, ರಾಜ್ಯ ಪೊಲೀಸ್ ಇಲಾಖೆ, ರಾಷ್ಟ್ರೀಕೃತ, ಗ್ರಾಮೀಣ ಬ್ಯಾಂಕ್, ಖಾಸಗಿ ಸಂಸ್ಥೆಗಳಿಗೆ ಸೇರಿದ ನೌಕರರಿಗೆ ಮಾತ್ರ ಇಂಥ ‘ಭಾಗ್ಯ’ ಇಲ್ಲ. ಅಷ್ಟೇ ಅಲ್ಲದೆ ದುಡಿದು ಬೆವರಿಳಿಸಿಕೊಳ್ಳುತ್ತಿರುವ ರೈತರು, ಕಾರ್ಮಿಕರು, ವಾಹನ ಚಾಲಕರನ್ನು ಬಿಟ್ಟು, ಕೇವಲ ರಾಜ್ಯ ಸರ್ಕಾರದ ನೌಕರರನ್ನಷ್ಟೇ ಬೇಸಿಗೆ ಬಾಧಿಸುತ್ತಿದೆಯೇ? ಅರ್ಧ ದಿನದ ಕೆಲಸಕ್ಕೆ ಅರ್ಧ ವೇತನ ನೀಡಲಾಗುತ್ತಿದೆಯೇ? ಹೋಗಲಿ ಬದಲಾದ ಅವಧಿಯಲ್ಲಾದರೂ ನೌಕರರು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆಯೇ ಎಂಬುದಕ್ಕೆ ಸರ್ಕಾರದ ಸ್ಪಷ್ಟನೆ ಏನು?