ಕಾಮಗಾರಿ ಭ್ರಷ್ಟಾಚಾರದ ಬಗೆಗಿನ ಸಂಪಾದಕೀಯದ (ಪ್ರ.ವಾ., ಏ. 14) ಒಟ್ಟಾರೆ ನಿಲುವು ಸರಿಯಾಗಿದೆ. ಆದರೆ ತಳಮಟ್ಟದಲ್ಲಿ ರಾಜಕಾರಣಿಗಳ ಪಾತ್ರ ಮೊದಲು ಬರುತ್ತದೆ, ಆಪ್ತ ಸಹಾಯಕರು, ಅಧಿಕಾರಿಗಳು ಆಮೇಲೆ ಎಂಟ್ರಿ ಕೊಡುತ್ತಾರೆ. ಮೃತ ವ್ಯಕ್ತಿ ಮೊದಲು ಬೇರೆ ಪಕ್ಷದ ಸದಸ್ಯನಾಗಿದ್ದ ಎಂಬಂತಹ ರಕ್ಷಣಾ ತಂತ್ರವೂ ಆರಂಭವಾಗಿದೆ. ಬಾಯಿಮಾತಿನ ಮಂಜೂರಿ ಕೊಟ್ಟಿದ್ದರೆ ಕಾಮಗಾರಿ ಆರಂಭವಾದ ಮೇಲಾದರೂ ಕ್ರಮಬದ್ಧ ಸ್ವೀಕೃತಿ ನೀಡಿದರೆ ಮಾತ್ರ ಪಾವತಿಯ ಪ್ರಶ್ನೆ ಬರುತ್ತದೆ. ಗ್ರಾಮೀಣಾಭಿವೃದ್ಧಿ ಇಲಾಖೆ ನಡೆಸುತ್ತಿರುವ ತನಿಖೆಯ ಪ್ರಾಥಮಿಕ ವರದಿಯನ್ನು ಸರ್ಕಾರ ಕೂಡಲೇ ಬಹಿರಂಗಪಡಿಸಬೇಕು.