ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಾವೇ ನೀಡಿದ ನಿರ್ದೇಶನವನ್ನು ಆರೋಗ್ಯ ಸಚಿವ ಶ್ರೀರಾಮುಲು ಗಾಳಿಗೆ ತೂರಿದ್ದಾರೆ. ಸೋಂಕು ತಂದೊಡ್ಡಿರುವ ಆತಂಕದ ಈ ದಿನಗಳಲ್ಲಿ ಜನಸಾಮಾನ್ಯರಿಗೆ ಮಾದರಿಯಾಗಬೇಕಾದವರು ಬೀದಿಯಲ್ಲಿ ಮೆರವಣಿಗೆ ಮಾಡಿಕೊಂಡು, ಹಾರ–ತುರಾಯಿ ಹಾಕಿಸಿಕೊಂಡು, ಹೂವು ಚೆಲ್ಲಿಸಿಕೊಳ್ಳುತ್ತಾ ಮೆರೆಯುವುದು ನಾಚಿಕೆಗೇಡು. ಸಾಮಾಜಿಕ ಅಂತರವೂ ಇಲ್ಲ, ಮುಖಗವುಸೂ ಇಲ್ಲ, ಮಂಗಳವಾದ್ಯದೊಡನೆ ನೂರಾರು ಜನರ ಗುಂಪು ಮೆರವಣಿಗೆ. ಇನ್ನು ಸಾಮಾನ್ಯ ಜನ ಇವರ ಆದೇಶವನ್ನು ಹೇಗೆ ಪಾಲಿಸುವುದು?