ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮಗಳಿಗೆ ಬೆಲೆ ಉಳಿಯುವುದೇ?

Last Updated 3 ಜೂನ್ 2020, 20:00 IST
ಅಕ್ಷರ ಗಾತ್ರ

ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಾವೇ ನೀಡಿದ ನಿರ್ದೇಶನವನ್ನು ಆರೋಗ್ಯ ಸಚಿವ ಶ್ರೀರಾಮುಲು ಗಾಳಿಗೆ ತೂರಿದ್ದಾರೆ. ಸೋಂಕು ತಂದೊಡ್ಡಿರುವ ಆತಂಕದ ಈ ದಿನಗಳಲ್ಲಿ ಜನಸಾಮಾನ್ಯರಿಗೆ ಮಾದರಿಯಾಗಬೇಕಾದವರು ಬೀದಿಯಲ್ಲಿ ಮೆರವಣಿಗೆ ಮಾಡಿಕೊಂಡು, ಹಾರ–ತುರಾಯಿ ಹಾಕಿಸಿಕೊಂಡು, ಹೂವು ಚೆಲ್ಲಿಸಿಕೊಳ್ಳುತ್ತಾ ಮೆರೆಯುವುದು ನಾಚಿಕೆಗೇಡು. ಸಾಮಾಜಿಕ ಅಂತರವೂ ಇಲ್ಲ, ಮುಖಗವುಸೂ ಇಲ್ಲ, ಮಂಗಳವಾದ್ಯದೊಡನೆ ನೂರಾರು ಜನರ ಗುಂಪು ಮೆರವಣಿಗೆ. ಇನ್ನು ಸಾಮಾನ್ಯ ಜನ ಇವರ ಆದೇಶವನ್ನು ಹೇಗೆ ಪಾಲಿಸುವುದು?

ಜನರ ಆರೋಗ್ಯ ರಕ್ಷಣೆಯ ಹೊಣೆ ಹೊತ್ತವರೇ ಹೀಗಾದರೆ ಸರ್ಕಾರದ ನಿಯಮಗಳಿಗೆ ಬೆಲೆ ಇರುತ್ತದೆಯೇ? ಇವರು, ಇವರ ಜೊತೆಗೂಡಿದ್ದ ಬೇಜವಾಬ್ದಾರಿ ಶಾಸಕರು, ಮುಖಂಡರ ಮೇಲೆ ಪ್ರಕರಣ ದಾಖಲಿಸಬೇಕು. ಶ್ರೀರಾಮುಲು ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು

-ಅತ್ತಿಹಳ್ಳಿ ದೇವರಾಜ್, ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT