<p><strong>ಶೋಭೆ ತರದ ಸಚಿವರ ಹೇಳಿಕೆ</strong></p>.<p>‘ಶಾಲಾ ಪಠ್ಯಪುಸ್ತಕಗಳಲ್ಲಿರುವ ದೋಷಗಳನ್ನು ಸಾರ್ವಜನಿಕರು ಗಂಭೀರವಾಗಿ ಗಮನಿಸಿದ್ದರೆ, ಸಂಬಂಧಪಟ್ಟವರ ಮೇಲೆ ಹಲ್ಲೆ ಮಾಡುತ್ತಿದ್ದರು’ ಎಂಬ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಹೇಳಿಕೆ (ಪ್ರ.ವಾ., ಅ. 9) ಖಂಡನೀಯ. ಈ ಹೇಳಿಕೆಯ ಮೂಲಕ ಸಚಿವರು ಪಠ್ಯಪುಸ್ತಕ ರಚನಾಕಾರರ ಮೇಲೆ ಪರೋಕ್ಷವಾಗಿ ಹಿಂಸೆಗೆ ಪ್ರಚೋದಿಸಿರುವಂತೆ ತೋರುತ್ತದೆ. ಪಠ್ಯಪುಸ್ತಕ ರಚನೆ ಮಾಡಿರುವವರು ವಿಷಯ ತಜ್ಞರೇ ಆಗಿರುವಾಗ, ಅವುಗಳಲ್ಲಿ ದೋಷಗಳಿದ್ದರೆ ವಿಷಯ ತಜ್ಞರ ಸಮಿತಿ ಪರಿಶೀಲಿಸಿ, ಚರ್ಚಿಸಿ ತೀರ್ಮಾನಿಸಬೇಕು ಎಂಬ ಅರಿವು ಸಚಿವರಿಗೆ ಇರಬೇಕಿತ್ತು.</p>.<p>ಆರ್ಎಸ್ಎಸ್ ತತ್ವ ಪ್ರಚಾರಕರೊಬ್ಬರ ಅಧ್ಯಕ್ಷತೆಯಲ್ಲಿಈಗಾಗಲೇ ಸಮಿತಿ ರಚಿಸಿರುವುದೇ ವಿವಾದವಾಗಿರು ವಾಗ, ಆ ತಪ್ಪನ್ನು ಮುಚ್ಚಿಹಾಕಲು ಮತ್ತು ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಈ ರೀತಿ ಸಲ್ಲದ ಹೇಳಿಕೆಗಳನ್ನು ಸಚಿವರು ನೀಡುತ್ತಿರುವಂತೆ ತೋರುತ್ತದೆ. ಸಂವಿಧಾನಬದ್ಧ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರ ಇಂತಹ ಹೇಳಿಕೆಗಳು ಯಾರಿಗೂ ಶೋಭೆ ತರುವುದಿಲ್ಲ.</p>.<p><strong>- ಡಾ. ಶಿವಕುಮಾರಿ ಎಂ.ಎಸ್.,ಬೆಂಗಳೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶೋಭೆ ತರದ ಸಚಿವರ ಹೇಳಿಕೆ</strong></p>.<p>‘ಶಾಲಾ ಪಠ್ಯಪುಸ್ತಕಗಳಲ್ಲಿರುವ ದೋಷಗಳನ್ನು ಸಾರ್ವಜನಿಕರು ಗಂಭೀರವಾಗಿ ಗಮನಿಸಿದ್ದರೆ, ಸಂಬಂಧಪಟ್ಟವರ ಮೇಲೆ ಹಲ್ಲೆ ಮಾಡುತ್ತಿದ್ದರು’ ಎಂಬ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಹೇಳಿಕೆ (ಪ್ರ.ವಾ., ಅ. 9) ಖಂಡನೀಯ. ಈ ಹೇಳಿಕೆಯ ಮೂಲಕ ಸಚಿವರು ಪಠ್ಯಪುಸ್ತಕ ರಚನಾಕಾರರ ಮೇಲೆ ಪರೋಕ್ಷವಾಗಿ ಹಿಂಸೆಗೆ ಪ್ರಚೋದಿಸಿರುವಂತೆ ತೋರುತ್ತದೆ. ಪಠ್ಯಪುಸ್ತಕ ರಚನೆ ಮಾಡಿರುವವರು ವಿಷಯ ತಜ್ಞರೇ ಆಗಿರುವಾಗ, ಅವುಗಳಲ್ಲಿ ದೋಷಗಳಿದ್ದರೆ ವಿಷಯ ತಜ್ಞರ ಸಮಿತಿ ಪರಿಶೀಲಿಸಿ, ಚರ್ಚಿಸಿ ತೀರ್ಮಾನಿಸಬೇಕು ಎಂಬ ಅರಿವು ಸಚಿವರಿಗೆ ಇರಬೇಕಿತ್ತು.</p>.<p>ಆರ್ಎಸ್ಎಸ್ ತತ್ವ ಪ್ರಚಾರಕರೊಬ್ಬರ ಅಧ್ಯಕ್ಷತೆಯಲ್ಲಿಈಗಾಗಲೇ ಸಮಿತಿ ರಚಿಸಿರುವುದೇ ವಿವಾದವಾಗಿರು ವಾಗ, ಆ ತಪ್ಪನ್ನು ಮುಚ್ಚಿಹಾಕಲು ಮತ್ತು ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಈ ರೀತಿ ಸಲ್ಲದ ಹೇಳಿಕೆಗಳನ್ನು ಸಚಿವರು ನೀಡುತ್ತಿರುವಂತೆ ತೋರುತ್ತದೆ. ಸಂವಿಧಾನಬದ್ಧ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರ ಇಂತಹ ಹೇಳಿಕೆಗಳು ಯಾರಿಗೂ ಶೋಭೆ ತರುವುದಿಲ್ಲ.</p>.<p><strong>- ಡಾ. ಶಿವಕುಮಾರಿ ಎಂ.ಎಸ್.,ಬೆಂಗಳೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>