ಧಾರವಾಡ- ಮೈಸೂರು- ಧಾರವಾಡ ಎಕ್ಸ್ಪ್ರೆಸ್ ರೈಲು ದಿನನಿತ್ಯ ಸಾವಿರಾರು ಪ್ರಯಾಣಿಕರನ್ನು ಎರಡೂ ನಗರಗಳಿಂದ ಕರೆದೊಯ್ಯುವ ಕಾಯಕವನ್ನು ನಿತ್ಯವೂ ಮಾಡುತ್ತಿತ್ತು. ಸಾಮಾನ್ಯ ಬೋಗಿ ಮತ್ತು ಹವಾನಿಯಂತ್ರಿತ ಬೋಗಿಗಳಲ್ಲೂ ಆಸನಗಳು ಸಿಗದೆ ಪ್ರಯಾಣಿಕರು ಪರದಾಡುತ್ತಿ
ದ್ದರು. ಕೋವಿಡ್– 19ರ ಕಾರಣವಾಗಿ ಮಾರ್ಚ್ನಿಂದ ತಾತ್ಕಾಲಿಕವಾಗಿ ಈ ರೈಲು ಸ್ಥಗಿತಗೊಂಡಿರುವುದರಿಂದ ಪ್ರಯಾಣಿಕರು ಬಾಡಿಗೆ ವಾಹನದಲ್ಲೋ ಅಥವಾ ಸ್ವಂತ ವಾಹನದಲ್ಲೋ ಹುಬ್ಬಳ್ಳಿ, ಧಾರವಾಡ, ಮೈಸೂರು ನಗರಗಳಿಗೆ ಹೋಗಿಬರುತ್ತಿದ್ದಾರೆ.