ಆರು ವರ್ಷಗಳ ಹಿಂದೆ ಪುತ್ರ ಮತ್ತು ಪತಿಯನ್ನು ಕಳೆದುಕೊಂಡ ತಮ್ಮ ತಾಯಿ ನೋವಿನಲ್ಲಿ ಜೀವನ ಸಾಗಿಸುತ್ತಿ ದ್ದರು, ಕ್ರಿಶ್ಚಿಯನ್ ಧರ್ಮಾಚರಣೆ ಮಾಡಿದರೆ ನೋವು ಕಡಿಮೆಯಾಗುತ್ತದೆ ಎಂಬ ಮಾತನ್ನು ನಂಬಿದ್ದ ಆಕೆ ಆ ಧರ್ಮಕ್ಕೆ ಮತಾಂತರಗೊಂಡಿದ್ದು ಈಗ ಮತ್ತೆ ಹಿಂದೂ ಧರ್ಮಕ್ಕೆ ಮರಳಿದ್ದಾರೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ. ಈ ಧರ್ಮದಿಂದ ಆ ಧರ್ಮಕ್ಕೆ, ಆ ಧರ್ಮದಿಂದ ಈ ಧರ್ಮಕ್ಕೆ ಹೋಗಿ ಬರುವುದೆಂದರೆ ಬಟ್ಟೆ ಬದಲಿಸಿದಷ್ಟು ಸುಲಭವಲ್ಲ.