ನಾನು ಪ್ರಧಾನಿ ಮೋದಿ ಅವರ ಅಭಿಮಾನಿ. ಅವರಿಗೆ ‘ಚಾಂಪಿಯನ್ಸ್ ಆಫ್ ದಿ ಅರ್ಥ್’ ಪ್ರಶಸ್ತಿ ಬಂದಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ಪರಿಸರದ ಬಗೆಗಿನ ಅವರ ಕಾಳಜಿ ಸ್ತುತ್ಯರ್ಹ. ಆದರೆ ಗಂಗಾ ನದಿ ನೀರನ್ನು ಶುದ್ಧೀಕರಿಸುವ ಉದ್ದೇಶದ ‘ನಮಾಮಿ ಗಂಗೆ’ ಯೋಜನೆಗೆ ಕೋಟಿಗಟ್ಟಲೆ ಸುರಿದರೂ ಗಂಗೆಯ ಸ್ಥಿತಿ ಸುಧಾರಣೆಯಾಗಿಲ್ಲ ಎಂಬುದು ನೋವಿನ ಸಂಗತಿ.