<p>ಶೃಂಗೇರಿಯಲ್ಲಿ ಇದೇ 10ರಿಂದ ಎರಡು ದಿನಗಳ ಕಾಲ ನಡೆಸಲು ಉದ್ದೇಶಿಸಿರುವ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ನೀಡಲು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ನಿರಾಕರಿಸಿರುವುದು ವರದಿಯಾಗಿದೆ (ಪ್ರ.ವಾ., ಜ. 6). ಈ ರೀತಿಯ ಬೆಳವಣಿಗೆಯಿಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ನೆಲೆಗಟ್ಟಿಗೆ ಬಹುದೊಡ್ಡ ಹೊಡೆತ ಬಿದ್ದಂತಲ್ಲವೇ? ಒಂದು ಸಮ್ಮೇಳನದ ಪೂರ್ವಭಾವಿ ತಯಾರಿ ಮತ್ತು ರೂಪುರೇಷೆಗಳು ಯಾವುದೇ ಏಕವ್ಯಕ್ತಿಯಿಂದ ದಿಢೀರನೆ ಆಗುವುದಿಲ್ಲ. ತನ್ನದೇ ಆದ ನಿಯಮಾವಳಿಗಳ ಮೂಲಕವೇ ಈ ಕಾರ್ಯಗಳು ನಡೆದಿರುತ್ತವೆ. ಹಾಗಿದ್ದರೂ ಸಮ್ಮೇಳನದ ದಿನಾಂಕ ನಿಗದಿಯಾಗಿ, ಸರ್ವಾಧ್ಯಕ್ಷರ ಆಯ್ಕೆಯಾದ ಮೇಲೂ ಸಮ್ಮೇಳನವೊಂದು ವಿವಾದಕ್ಕೆ ಸಿಲುಕುತ್ತದೆ ಎಂದರೆ, ಅದಕ್ಕೆ ಯಾರನ್ನು ದೂಷಿಸುವುದು? ಸರ್ಕಾರವನ್ನೇ, ಸಚಿವರನ್ನೇ ಅಥವಾ ಸಾಹಿತ್ಯ ಪರಿಷತ್ತನ್ನೇ? ಇವ್ಯಾವುವನ್ನೂ ಅಲ್ಲ ಎನ್ನುವುದಾದರೆ, ನಮ್ಮ ಸಂಸ್ಕೃತಿಯನ್ನೇ?</p>.<p>ಸಾಹಿತ್ಯ ಕ್ಷೇತ್ರದೊಳಗೆ ರಾಜಕೀಯ ಬೆರೆತುಹೋಗಿ ಬಹಳ ಕಾಲವಾಯಿತು. ಆದರೆ ಅದು ವೈಯಕ್ತಿಕ ಧೋರಣೆಗಳಿಂದ ತುಂಬಿಕೊಳ್ಳುತ್ತಿದೆ ಎನ್ನುವುದಾದರೆ, ಕನ್ನಡ, ಸಾಹಿತ್ಯ, ಸಂಸ್ಕೃತಿ, ಈ ನೆಲ, ಭಾಷೆ ಎಲ್ಲವೂ ತೋರಿಕೆಮಯವಾಗುತ್ತವೆ. ಯಾರನ್ನೋ ಮೆಚ್ಚಿಸಲು, ಮತ್ಯಾವುದೋ ವ್ಯವಸ್ಥೆಯನ್ನು ವಿಜೃಂಭಿಸಲು ಅವುಗಳನ್ನು ಬಳಸಿದಂತೆ ಆಗುತ್ತದೆ. ರಾಜಕೀಯವು ಹೊಲಸಾಗಿರುವುದಂತೂ ಸತ್ಯ. ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತೂ ಇಂತಹ ಅಸಂಗತ ಕರಿನೆರಳನ್ನು ಹೊದ್ದುಕೊಂಡು ಉಸಿರಾಡಬೇಕಾಗಿರುವುದು ವಿಪರ್ಯಾಸವಲ್ಲದೆ ಮತ್ತೇನು?</p>.<p><strong>-ಅಶ್ವತ್ಥ ಕಲ್ಲೇದೇವರಹಳ್ಳಿ, <span class="Designate">ಕಡೂರು</span></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶೃಂಗೇರಿಯಲ್ಲಿ ಇದೇ 10ರಿಂದ ಎರಡು ದಿನಗಳ ಕಾಲ ನಡೆಸಲು ಉದ್ದೇಶಿಸಿರುವ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ನೀಡಲು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ನಿರಾಕರಿಸಿರುವುದು ವರದಿಯಾಗಿದೆ (ಪ್ರ.ವಾ., ಜ. 6). ಈ ರೀತಿಯ ಬೆಳವಣಿಗೆಯಿಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ನೆಲೆಗಟ್ಟಿಗೆ ಬಹುದೊಡ್ಡ ಹೊಡೆತ ಬಿದ್ದಂತಲ್ಲವೇ? ಒಂದು ಸಮ್ಮೇಳನದ ಪೂರ್ವಭಾವಿ ತಯಾರಿ ಮತ್ತು ರೂಪುರೇಷೆಗಳು ಯಾವುದೇ ಏಕವ್ಯಕ್ತಿಯಿಂದ ದಿಢೀರನೆ ಆಗುವುದಿಲ್ಲ. ತನ್ನದೇ ಆದ ನಿಯಮಾವಳಿಗಳ ಮೂಲಕವೇ ಈ ಕಾರ್ಯಗಳು ನಡೆದಿರುತ್ತವೆ. ಹಾಗಿದ್ದರೂ ಸಮ್ಮೇಳನದ ದಿನಾಂಕ ನಿಗದಿಯಾಗಿ, ಸರ್ವಾಧ್ಯಕ್ಷರ ಆಯ್ಕೆಯಾದ ಮೇಲೂ ಸಮ್ಮೇಳನವೊಂದು ವಿವಾದಕ್ಕೆ ಸಿಲುಕುತ್ತದೆ ಎಂದರೆ, ಅದಕ್ಕೆ ಯಾರನ್ನು ದೂಷಿಸುವುದು? ಸರ್ಕಾರವನ್ನೇ, ಸಚಿವರನ್ನೇ ಅಥವಾ ಸಾಹಿತ್ಯ ಪರಿಷತ್ತನ್ನೇ? ಇವ್ಯಾವುವನ್ನೂ ಅಲ್ಲ ಎನ್ನುವುದಾದರೆ, ನಮ್ಮ ಸಂಸ್ಕೃತಿಯನ್ನೇ?</p>.<p>ಸಾಹಿತ್ಯ ಕ್ಷೇತ್ರದೊಳಗೆ ರಾಜಕೀಯ ಬೆರೆತುಹೋಗಿ ಬಹಳ ಕಾಲವಾಯಿತು. ಆದರೆ ಅದು ವೈಯಕ್ತಿಕ ಧೋರಣೆಗಳಿಂದ ತುಂಬಿಕೊಳ್ಳುತ್ತಿದೆ ಎನ್ನುವುದಾದರೆ, ಕನ್ನಡ, ಸಾಹಿತ್ಯ, ಸಂಸ್ಕೃತಿ, ಈ ನೆಲ, ಭಾಷೆ ಎಲ್ಲವೂ ತೋರಿಕೆಮಯವಾಗುತ್ತವೆ. ಯಾರನ್ನೋ ಮೆಚ್ಚಿಸಲು, ಮತ್ಯಾವುದೋ ವ್ಯವಸ್ಥೆಯನ್ನು ವಿಜೃಂಭಿಸಲು ಅವುಗಳನ್ನು ಬಳಸಿದಂತೆ ಆಗುತ್ತದೆ. ರಾಜಕೀಯವು ಹೊಲಸಾಗಿರುವುದಂತೂ ಸತ್ಯ. ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತೂ ಇಂತಹ ಅಸಂಗತ ಕರಿನೆರಳನ್ನು ಹೊದ್ದುಕೊಂಡು ಉಸಿರಾಡಬೇಕಾಗಿರುವುದು ವಿಪರ್ಯಾಸವಲ್ಲದೆ ಮತ್ತೇನು?</p>.<p><strong>-ಅಶ್ವತ್ಥ ಕಲ್ಲೇದೇವರಹಳ್ಳಿ, <span class="Designate">ಕಡೂರು</span></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>