<p>ನೀರು, ವಿದ್ಯುತ್ ದರ ಹಾಗೂ ಮನೆ ಕಂದಾಯ ಹೆಚ್ಚಿಸುವ ಪ್ರಸ್ತಾವವನ್ನು ಸಂಬಂಧಪಟ್ಟ ಸಂಸ್ಥೆಗಳು ಆಗಿಂದಾಗ್ಗೆ ಮಾಡುತ್ತಲೇ ಇರುತ್ತವೆ. ಹೀಗೆ ಹೆಚ್ಚಳದ ಪ್ರಸ್ತಾವ ಮುಂದಿಡುವ ಮುನ್ನ ಈ ಸಂಸ್ಥೆಗಳು ತಮಗೆ ಬರಬೇಕಾದ ಬಾಕಿಯ ಬಗ್ಗೆ ಯೋಚಿಸುವುದೇ ಇಲ್ಲ. ಪ್ರಾಮಾಣಿಕವಾಗಿ ಅಥವಾ ಯಾವುದೋ ಒತ್ತಡ, ಮುಲಾಜಿಗೆ ಒಳಗಾಗಿ ವಸೂಲಿ ಮಾಡುತ್ತಿಲ್ಲವೇನೊ! ಜಲಮಂಡಳಿ ಈಗ ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಿಸಲು ಮುಂದಾಗಿದೆ.</p>.<p>ಮಾಧ್ಯಮ ಮಾಹಿತಿ ಪ್ರಕಾರ, ಜಲಮಂಡಳಿಗೆ 2019ರ ಡಿಸೆಂಬರ್ ತಿಂಗಳವರೆಗೆ ವಸೂಲಾಗದ ಬಾಕಿ ಕೋಟ್ಯಂತರ ರೂಪಾಯಿ ಇದೆ. ಸೋಜಿಗದ ಸಂಗತಿ ಎಂದರೆ, ಬಿಬಿಎಂಪಿ, ವಾಣಿಜ್ಯ ಕ್ಷೇತ್ರದ ಜೊತೆಗೆ ಸರ್ಕಾರವೂ ಈ ಬಾಕಿದಾರರಲ್ಲಿ ಸೇರಿರುವುದು. ಇನ್ನು ಗೃಹ ಬಳಕೆದಾರರು, ಕೈಗಾರಿಕೆಗಳು, ಪ್ರಾಧಿಕಾರಗಳು ಹೀಗೆ ಬಾಕಿದಾರರು ಬಹಳಷ್ಟಿದ್ದಾರೆ.</p>.<p>ಇದು ಮಂಡಳಿಯ ಕಾರ್ಯವೈಖರಿಗೆ ಹಿಡಿದ ಕನ್ನಡಿ. ಸರ್ಕಾರವೂ ಸೇರಿದಂತೆ ಇತರ ಸಂಸ್ಥೆಗಳಿಂದ ಬಾಕಿ ವಸೂಲು ಮಾಡದೆಯೇ, ದರ ಹೆಚ್ಚಿಸುವ ಮೂಲಕ ನಷ್ಟ ಭರ್ತಿಗೆ ಗ್ರಾಹಕರನ್ನು ಹೊಣೆ ಮಾಡುತ್ತದೆ ಜಲಮಂಡಳಿ. ಇದು ನೈತಿಕವಾಗಿ ಹೊಣೆಗೇಡಿತನ ಅಲ್ಲವೇ?</p>.<p><em><strong>-ಸಾಮಗ ದತ್ತಾತ್ರಿ, ಬೆಂಗಳೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನೀರು, ವಿದ್ಯುತ್ ದರ ಹಾಗೂ ಮನೆ ಕಂದಾಯ ಹೆಚ್ಚಿಸುವ ಪ್ರಸ್ತಾವವನ್ನು ಸಂಬಂಧಪಟ್ಟ ಸಂಸ್ಥೆಗಳು ಆಗಿಂದಾಗ್ಗೆ ಮಾಡುತ್ತಲೇ ಇರುತ್ತವೆ. ಹೀಗೆ ಹೆಚ್ಚಳದ ಪ್ರಸ್ತಾವ ಮುಂದಿಡುವ ಮುನ್ನ ಈ ಸಂಸ್ಥೆಗಳು ತಮಗೆ ಬರಬೇಕಾದ ಬಾಕಿಯ ಬಗ್ಗೆ ಯೋಚಿಸುವುದೇ ಇಲ್ಲ. ಪ್ರಾಮಾಣಿಕವಾಗಿ ಅಥವಾ ಯಾವುದೋ ಒತ್ತಡ, ಮುಲಾಜಿಗೆ ಒಳಗಾಗಿ ವಸೂಲಿ ಮಾಡುತ್ತಿಲ್ಲವೇನೊ! ಜಲಮಂಡಳಿ ಈಗ ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಿಸಲು ಮುಂದಾಗಿದೆ.</p>.<p>ಮಾಧ್ಯಮ ಮಾಹಿತಿ ಪ್ರಕಾರ, ಜಲಮಂಡಳಿಗೆ 2019ರ ಡಿಸೆಂಬರ್ ತಿಂಗಳವರೆಗೆ ವಸೂಲಾಗದ ಬಾಕಿ ಕೋಟ್ಯಂತರ ರೂಪಾಯಿ ಇದೆ. ಸೋಜಿಗದ ಸಂಗತಿ ಎಂದರೆ, ಬಿಬಿಎಂಪಿ, ವಾಣಿಜ್ಯ ಕ್ಷೇತ್ರದ ಜೊತೆಗೆ ಸರ್ಕಾರವೂ ಈ ಬಾಕಿದಾರರಲ್ಲಿ ಸೇರಿರುವುದು. ಇನ್ನು ಗೃಹ ಬಳಕೆದಾರರು, ಕೈಗಾರಿಕೆಗಳು, ಪ್ರಾಧಿಕಾರಗಳು ಹೀಗೆ ಬಾಕಿದಾರರು ಬಹಳಷ್ಟಿದ್ದಾರೆ.</p>.<p>ಇದು ಮಂಡಳಿಯ ಕಾರ್ಯವೈಖರಿಗೆ ಹಿಡಿದ ಕನ್ನಡಿ. ಸರ್ಕಾರವೂ ಸೇರಿದಂತೆ ಇತರ ಸಂಸ್ಥೆಗಳಿಂದ ಬಾಕಿ ವಸೂಲು ಮಾಡದೆಯೇ, ದರ ಹೆಚ್ಚಿಸುವ ಮೂಲಕ ನಷ್ಟ ಭರ್ತಿಗೆ ಗ್ರಾಹಕರನ್ನು ಹೊಣೆ ಮಾಡುತ್ತದೆ ಜಲಮಂಡಳಿ. ಇದು ನೈತಿಕವಾಗಿ ಹೊಣೆಗೇಡಿತನ ಅಲ್ಲವೇ?</p>.<p><em><strong>-ಸಾಮಗ ದತ್ತಾತ್ರಿ, ಬೆಂಗಳೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>