ಪ್ಲಾಸ್ಟಿಕ್ ಎಂಬ ಮಹಾಮಾರಿಯಿಂದ ಪರಿಸರಕ್ಕೆ ಆಗುವ ಹಾನಿ ಅಷ್ಟಿಷ್ಟಲ್ಲ. ದೇವಸ್ಥಾನ ಎಂದಮೇಲೆ ಪೂಜೆ– ಪುನಸ್ಕಾರದ ಹೆಸರಿನಲ್ಲಿ ಪ್ಲಾಸ್ಟಿಕ್ ಅನ್ನು ಜನ ಎಗ್ಗಿಲ್ಲದೇ ಬಳಸುತ್ತಾರೆ. ಎಷ್ಟು ಜಾಗೃತಿ ಮೂಡಿಸಿದರೂ ಜನರು ಪ್ಲಾಸ್ಟಿಕ್ ಬಳಸುವುದನ್ನು ಬಿಡುತ್ತಿಲ್ಲ. ಹೀಗಾಗಿ, ಜಗನ್ನಾಥ ದೇವಾಲಯದಂತೆ ದೇಶದ ಎಲ್ಲ ದೇವಾಲಯಗಳೂ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದರೆ ಪರಿಸರ ಮಾಲಿನ್ಯವನ್ನು ಎಷ್ಟೋ ಮಟ್ಟಿಗೆ ತಡೆಗಟ್ಟಿದಂತೆ ಆಗುತ್ತದೆ.