<p>ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ನೀಡಿರುವುದು ಸರಿಯಲ್ಲ. ಈ ಕಾರ್ಯ ಒಮ್ಮೆ ಪ್ರಾರಂಭವಾಯಿತೆಂದರೆ, ಕೊರೊನಾ ಹಿನ್ನೆಲೆಯಲ್ಲಿ ಬಹಳಷ್ಟು ಸಮಸ್ಯೆಗಳು ಶುರುವಾಗುತ್ತವೆ.</p>.<p>ಚಿತ್ರೀಕರಣಕ್ಕೆ ನಟ–ನಟಿಯರನ್ನು ಕರೆತರುವ ವಾಹನದಲ್ಲಿ ಹಾಗೂ ಚಿತ್ರೀಕರಣದ ಸ್ಥಳದಲ್ಲಿ ಅಂತರ ಕಾಯ್ದುಕೊಳ್ಳುವುದು ಕಷ್ಟಸಾಧ್ಯ. ನಟ-ನಟಿಯರಾಗಲೀ, ಪದೇಪದೇ ಸೂಚನೆಗಳನ್ನು ನೀಡುತ್ತಿರಬೇಕಾದ ನಿರ್ದೇಶನದ ತಂಡವಾಗಲೀ ಮಾಸ್ಕ್ ಧರಿಸಲಾಗದು.</p>.<p>ಕೇಟರಿಂಗ್ ಮೂಲಕ ತರಿಸುವ ಊಟ, ತಿಂಡಿಯ ಸುರಕ್ಷೆ ಬಗ್ಗೆ ಖಾತರಿ ಇರುವುದಿಲ್ಲ. ಮೇಲಾಗಿ ಚಿತ್ರೀಕರಣ ತಂಡದ ಬಹಳಷ್ಟು ತಾಂತ್ರಿಕ ಸಹಾಯಕರು ಹಳ್ಳಿಗಳಿಂದ ಬಂದು ಬೆಂಗಳೂರಿನಲ್ಲಿ ಬದುಕು ಕಂಡುಕೊಂಡಿದ್ದವರು.</p>.<p>ಈಗಿನ ಲಾಕ್ಡೌನ್ ಸ್ಥಿತಿಯಲ್ಲಿ ಅವರು ಊರುಗಳಿಂದ ಬೆಂಗಳೂರಿಗೆ ಬರಲಾಗುತ್ತಿಲ್ಲ. ಹೀಗಾಗಿ ಪರ್ಯಾಯ ಕಾರ್ಮಿಕರನ್ನು, ತಂತ್ರಜ್ಞರನ್ನು ಚಿತ್ರೀಕರಣಕ್ಕೆ ನೇಮಿಸಿಕೊಂಡರೆ, ತಮ್ಮದಲ್ಲದ ತಪ್ಪಿಗಾಗಿ ಈ ಬಡಪಾಯಿಗಳ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಬೀಳುತ್ತದೆ. ಕೊನೇಪಕ್ಷ ಈ ತಿಂಗಳ ಕೊನೆಯವರೆಗಾದರೂ ಇವುಗಳ ಚಿತ್ರೀಕರಣ ಸ್ಥಗಿತ<br />ಗೊಳಿಸುವುದು ಒಳ್ಳೆಯದು.<br /><em><strong>-ಎಸ್.ಯತೀಶ್ ಕುಮಾರ್,ಸಾಸಲುಕೊಪ್ಪ, ನಾಗಮಂಗಲ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ನೀಡಿರುವುದು ಸರಿಯಲ್ಲ. ಈ ಕಾರ್ಯ ಒಮ್ಮೆ ಪ್ರಾರಂಭವಾಯಿತೆಂದರೆ, ಕೊರೊನಾ ಹಿನ್ನೆಲೆಯಲ್ಲಿ ಬಹಳಷ್ಟು ಸಮಸ್ಯೆಗಳು ಶುರುವಾಗುತ್ತವೆ.</p>.<p>ಚಿತ್ರೀಕರಣಕ್ಕೆ ನಟ–ನಟಿಯರನ್ನು ಕರೆತರುವ ವಾಹನದಲ್ಲಿ ಹಾಗೂ ಚಿತ್ರೀಕರಣದ ಸ್ಥಳದಲ್ಲಿ ಅಂತರ ಕಾಯ್ದುಕೊಳ್ಳುವುದು ಕಷ್ಟಸಾಧ್ಯ. ನಟ-ನಟಿಯರಾಗಲೀ, ಪದೇಪದೇ ಸೂಚನೆಗಳನ್ನು ನೀಡುತ್ತಿರಬೇಕಾದ ನಿರ್ದೇಶನದ ತಂಡವಾಗಲೀ ಮಾಸ್ಕ್ ಧರಿಸಲಾಗದು.</p>.<p>ಕೇಟರಿಂಗ್ ಮೂಲಕ ತರಿಸುವ ಊಟ, ತಿಂಡಿಯ ಸುರಕ್ಷೆ ಬಗ್ಗೆ ಖಾತರಿ ಇರುವುದಿಲ್ಲ. ಮೇಲಾಗಿ ಚಿತ್ರೀಕರಣ ತಂಡದ ಬಹಳಷ್ಟು ತಾಂತ್ರಿಕ ಸಹಾಯಕರು ಹಳ್ಳಿಗಳಿಂದ ಬಂದು ಬೆಂಗಳೂರಿನಲ್ಲಿ ಬದುಕು ಕಂಡುಕೊಂಡಿದ್ದವರು.</p>.<p>ಈಗಿನ ಲಾಕ್ಡೌನ್ ಸ್ಥಿತಿಯಲ್ಲಿ ಅವರು ಊರುಗಳಿಂದ ಬೆಂಗಳೂರಿಗೆ ಬರಲಾಗುತ್ತಿಲ್ಲ. ಹೀಗಾಗಿ ಪರ್ಯಾಯ ಕಾರ್ಮಿಕರನ್ನು, ತಂತ್ರಜ್ಞರನ್ನು ಚಿತ್ರೀಕರಣಕ್ಕೆ ನೇಮಿಸಿಕೊಂಡರೆ, ತಮ್ಮದಲ್ಲದ ತಪ್ಪಿಗಾಗಿ ಈ ಬಡಪಾಯಿಗಳ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಬೀಳುತ್ತದೆ. ಕೊನೇಪಕ್ಷ ಈ ತಿಂಗಳ ಕೊನೆಯವರೆಗಾದರೂ ಇವುಗಳ ಚಿತ್ರೀಕರಣ ಸ್ಥಗಿತ<br />ಗೊಳಿಸುವುದು ಒಳ್ಳೆಯದು.<br /><em><strong>-ಎಸ್.ಯತೀಶ್ ಕುಮಾರ್,ಸಾಸಲುಕೊಪ್ಪ, ನಾಗಮಂಗಲ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>