ಕಾರ್ಮಿಕರ ಶೋಷಣೆ ನನಗೆ ಗೊತ್ತು, ಆದರೆ ಅವರನ್ನು ಕಾಲ್ಚೆಂಡಾಗಿ (ಫುಟ್ಬಾಲ್) ಪರಿವರ್ತಿಸುವುದು ಗೊತ್ತಿರಲಿಲ್ಲ. ಮಾನವೀಯತೆಗೆ ಹೆಸರಾದ ಕರ್ನಾಟಕದ ಮಾನ ಉಳಿಯಬೇಕಾದರೆ ಸರ್ಕಾರವು ಕೂಡಲೇ ಈ ಕ್ರಮಗಳನ್ನು ಕೈಗೊಳ್ಳಬೇಕು: ವಲಸೆ ಕಾರ್ಮಿಕರು ಎಲ್ಲಿ ಕಂಡರೂ (ಎಲ್ಲಿಯಾದರೂ ಉಳಿದುಕೊಂಡಿರುವವರು, ಎತ್ತಂಗಡಿಯ ಭೀತಿಯಲ್ಲಿರುವವರು, ನಡೆದುಕೊಂಡು ಹೋಗುತ್ತಿರುವವರು) ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸ್ ಠಾಣೆಗೆ ತಿಳಿಸಲು ಜನರಿಗೆ ಸೂಚನೆ ಕೊಡಬೇಕು.