ಈ ಬಿಕ್ಕಟ್ಟಿನ ಕಾಲದಲ್ಲಿ ಕಾರ್ಮಿಕರು, ವಲಸೆ ಹೋಗುವವರು– ಬರುವವರು, ಬಡವರ ಒಟ್ಟು ಬದುಕು, ಆರೋಗ್ಯದ ಬಗ್ಗೆ ಅವರ ಅಪಾರ ಕಾಳಜಿ ಮೆಚ್ಚುವಂಥದ್ದು. ಅವರು ಮುಂದಿಟ್ಟ ಅನೇಕ ಸಲಹೆಗಳನ್ನು ಸರ್ಕಾರ, ಉದ್ಯಮಿಗಳು ಹಾಗೂ ಪ್ರಜ್ಞಾವಂತ ಸಮಾಜ ಗಂಭೀರವಾಗಿ ಪರಿಗಣಿಸಬೇಕು. ಅವೆಲ್ಲವೂ ನಮ್ಮ ಆರ್ಥಿಕ ವ್ಯವಸ್ಥೆ, ಮಾನವೀಯ ಸಂಬಂಧಗಳಲ್ಲಿ ತೀವ್ರ ಬದಲಾವಣೆ ತರುವುದರಲ್ಲಿ ಸಂದೇಹವಿಲ್ಲ .