ಇದು ಒಂದೆಡೆಯಾದರೆ, ಇನ್ನು ಎಷ್ಟೋ ಊರುಗಳಲ್ಲಿ ಮುಖ್ಯ ಬಲ್ಬ್ಗಳನ್ನು ಮುಖ್ಯ ಲೈನ್ಗೇ ಜೋಡಿಸಿಬಿಟ್ಟಿರುತ್ತಾರೆ. ಅಲ್ಲಿ ಬಲ್ಬ್ ಉರಿಸುವ, ಆರಿಸುವ ಪ್ರಮೇಯವೇ ಇರದು. ವಿದ್ಯುತ್ ಸಂಪರ್ಕ ನಿಂತಾಗ ಮಾತ್ರವೇ ಬಂದ್ ಆಗಿ ಸೂರ್ಯನಿಗೇ ಸ್ಪರ್ಧೆ ಒಡ್ಡುತ್ತವೆ. ಹಗಲು– ರಾತ್ರಿ ಉರಿದು ಉರಿದು ಹಾಳಾಗುವ ಬಲ್ಬ್ಗಳನ್ನು ಬದಲಾಯಿಸಲು ಮೇಲಿಂದ ಮೇಲೆ ಮಾಡುವ ಇನ್ನೂ ಒಂದು ಖರ್ಚಿನ ಅರಿವೇ ಇಲ್ಲದಿರುವುದು ದೊಡ್ಡ ದುರಂತ. ಈ ಅವಾಂತರಗಳನ್ನು ನಿವಾರಿಸಿಕೊಳ್ಳದೆ ಈಗಿನ ಬಾಕಿ ತುಂಬಿದರೆ, ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದು.
-ಭೀಮಣ್ಣ ಹುಣಸೀಕಟ್ಟಿ,ಬಾಗಲಕೋಟೆ