<p>ಉನ್ನತ ಶಿಕ್ಷಣದಲ್ಲಿ ಸೆಮಿಸ್ಟರ್ ಪದ್ಧತಿಯು ಮರುಚಿಂತನೆ, ಮೌಲ್ಯಮಾಪನಕ್ಕೆ ಒಳಗಾಗಬೇಕೆಂಬ ಬರಗೂರು ರಾಮಚಂದ್ರಪ್ಪ ಅವರ ಅಭಿಪ್ರಾಯವು (ಪ್ರ.ವಾ., ಜುಲೈ 13) ಜ್ಞಾನಾಸಕ್ತರಿಗೆ ಸ್ಫೂರ್ತಿಯಾಗಿದೆ. ಒಂದು ಸೆಮಿಸ್ಟರ್ನ 6 ತಿಂಗಳಲ್ಲಿ 2 ತಿಂಗಳು ಪರೀಕ್ಷೆ, ಮೌಲ್ಯಮಾಪನಕ್ಕೆ ವ್ಯಯವಾದರೆ, ಇನ್ನು 4 ತಿಂಗಳುಗಳು ದೊರಕುತ್ತವೆ.</p>.<p>ಈ 120 ದಿನಗಳಲ್ಲಿ ಸುಮಾರು 20 ದಿನಗಳನ್ನು ಭಾನುವಾರ, ಹಬ್ಬ ಹರಿದಿನಗಳಿಗಾಗಿ ತೆಗೆದರೆ, ಉಳಿದ 100 ದಿನಗಳಲ್ಲಿ,ಪ್ರತಿಭಟನೆಗಳು, ವಿದ್ಯಾರ್ಥಿಗಳ ಸ್ವಯಂಘೋಷಿತ ಬಂದ್, ರಜೆ ಮುಂತಾದವುಗಳಿಂದ 90 ದಿನ ಮಾತ್ರ ಬೋಧನೆಗೆ, ಕಲಿಕೆಗೆ ಸಿಗಬಹುದು.</p>.<p>ಈ ಅಲ್ಪ ಅವಧಿಯಲ್ಲಿ ದೀರ್ಘ ಅಧ್ಯಯನ, ಬೋಧನೆ ಸಾಧ್ಯವಾಗುತ್ತಿಲ್ಲ. ಸೆಮಿಸ್ಟರ್ ಪದ್ಧತಿ ಬಂದಮೇಲೆ ಪದವಿ ಪಡೆಯುವ, ಅಂಕ ಗಳಿಕೆಯ ಪ್ರಮಾಣ ಹೆಚ್ಚಾಗಿದೆ ನಿಜ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಸಮುದಾಯ ಹಿನ್ನಡೆ ಕಾಣುತ್ತಿದೆ. ಅಂದರೆ ಸೀಮಿತ ವಿಷಯ ಬಿಟ್ಟು ಬೇರೆ ಅಧ್ಯಯನಕ್ಕೆ ಆಸ್ಪದವಾಗುತ್ತಿಲ್ಲ.</p>.<p>ವಾರ್ಷಿಕ ಪರೀಕ್ಷಾ ಪದ್ಧತಿ ಇದ್ದಾಗ ಮಾನವಿಕ ವಿಭಾಗದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮುಂದಿದ್ದರು. ಆದರೆ ಪ್ರಸ್ತುತ ಈ ವಿಭಾಗದ ವಿದ್ಯಾರ್ಥಿಗಳು ಹಿನ್ನೆಲೆಗೆ ಬಂದಿದ್ದಾರೆ. ಆದ್ದರಿಂದ ಕೇವಲ ಅಂಕ ಗಳಿಕೆ ಬೇಕೋ ಜ್ಞಾನಸಾಗರ ಬೇಕೋ ಶಿಕ್ಷಣದಿಂದ ಭವಿಷ್ಯತ್ತನ್ನು ರೂಪಿಸಿಕೊಳ್ಳಬೇಕೋ ಎಂಬುದನ್ನೆಲ್ಲ ಸೂಕ್ತವಾಗಿ ಚಿಂತಿಸಿ, ಅದಕ್ಕೆ ಪೂರಕವಾಗಿ ಸ್ಪಂದಿಸಿದರೆ ವಿದ್ಯಾರ್ಥಿಗಳನ್ನು ಜ್ಞಾನವಂತರನ್ನಾಗಿಸಲು ಸಾಧ್ಯ.<br />-<em><strong>ಡಾ. ಬಿ.ಪಿ.ಕುಮಾರ್,ದಾವಣಗೆರೆ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉನ್ನತ ಶಿಕ್ಷಣದಲ್ಲಿ ಸೆಮಿಸ್ಟರ್ ಪದ್ಧತಿಯು ಮರುಚಿಂತನೆ, ಮೌಲ್ಯಮಾಪನಕ್ಕೆ ಒಳಗಾಗಬೇಕೆಂಬ ಬರಗೂರು ರಾಮಚಂದ್ರಪ್ಪ ಅವರ ಅಭಿಪ್ರಾಯವು (ಪ್ರ.ವಾ., ಜುಲೈ 13) ಜ್ಞಾನಾಸಕ್ತರಿಗೆ ಸ್ಫೂರ್ತಿಯಾಗಿದೆ. ಒಂದು ಸೆಮಿಸ್ಟರ್ನ 6 ತಿಂಗಳಲ್ಲಿ 2 ತಿಂಗಳು ಪರೀಕ್ಷೆ, ಮೌಲ್ಯಮಾಪನಕ್ಕೆ ವ್ಯಯವಾದರೆ, ಇನ್ನು 4 ತಿಂಗಳುಗಳು ದೊರಕುತ್ತವೆ.</p>.<p>ಈ 120 ದಿನಗಳಲ್ಲಿ ಸುಮಾರು 20 ದಿನಗಳನ್ನು ಭಾನುವಾರ, ಹಬ್ಬ ಹರಿದಿನಗಳಿಗಾಗಿ ತೆಗೆದರೆ, ಉಳಿದ 100 ದಿನಗಳಲ್ಲಿ,ಪ್ರತಿಭಟನೆಗಳು, ವಿದ್ಯಾರ್ಥಿಗಳ ಸ್ವಯಂಘೋಷಿತ ಬಂದ್, ರಜೆ ಮುಂತಾದವುಗಳಿಂದ 90 ದಿನ ಮಾತ್ರ ಬೋಧನೆಗೆ, ಕಲಿಕೆಗೆ ಸಿಗಬಹುದು.</p>.<p>ಈ ಅಲ್ಪ ಅವಧಿಯಲ್ಲಿ ದೀರ್ಘ ಅಧ್ಯಯನ, ಬೋಧನೆ ಸಾಧ್ಯವಾಗುತ್ತಿಲ್ಲ. ಸೆಮಿಸ್ಟರ್ ಪದ್ಧತಿ ಬಂದಮೇಲೆ ಪದವಿ ಪಡೆಯುವ, ಅಂಕ ಗಳಿಕೆಯ ಪ್ರಮಾಣ ಹೆಚ್ಚಾಗಿದೆ ನಿಜ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಸಮುದಾಯ ಹಿನ್ನಡೆ ಕಾಣುತ್ತಿದೆ. ಅಂದರೆ ಸೀಮಿತ ವಿಷಯ ಬಿಟ್ಟು ಬೇರೆ ಅಧ್ಯಯನಕ್ಕೆ ಆಸ್ಪದವಾಗುತ್ತಿಲ್ಲ.</p>.<p>ವಾರ್ಷಿಕ ಪರೀಕ್ಷಾ ಪದ್ಧತಿ ಇದ್ದಾಗ ಮಾನವಿಕ ವಿಭಾಗದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮುಂದಿದ್ದರು. ಆದರೆ ಪ್ರಸ್ತುತ ಈ ವಿಭಾಗದ ವಿದ್ಯಾರ್ಥಿಗಳು ಹಿನ್ನೆಲೆಗೆ ಬಂದಿದ್ದಾರೆ. ಆದ್ದರಿಂದ ಕೇವಲ ಅಂಕ ಗಳಿಕೆ ಬೇಕೋ ಜ್ಞಾನಸಾಗರ ಬೇಕೋ ಶಿಕ್ಷಣದಿಂದ ಭವಿಷ್ಯತ್ತನ್ನು ರೂಪಿಸಿಕೊಳ್ಳಬೇಕೋ ಎಂಬುದನ್ನೆಲ್ಲ ಸೂಕ್ತವಾಗಿ ಚಿಂತಿಸಿ, ಅದಕ್ಕೆ ಪೂರಕವಾಗಿ ಸ್ಪಂದಿಸಿದರೆ ವಿದ್ಯಾರ್ಥಿಗಳನ್ನು ಜ್ಞಾನವಂತರನ್ನಾಗಿಸಲು ಸಾಧ್ಯ.<br />-<em><strong>ಡಾ. ಬಿ.ಪಿ.ಕುಮಾರ್,ದಾವಣಗೆರೆ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>