ನಾವು ಚಿಕ್ಕವರಿದ್ದಾಗ ಊರಿಗೆ ಒಂದೆರಡು ದೇವಸ್ಥಾನಗಳು ಮಾತ್ರ ಇರುತ್ತಿದ್ದವು. ಆಗ ಜನರೂ ಬಡವರು ಅದರಂತೆ ದೇವರುಗಳೂ ಬಡವಾಗಿದ್ದವು. ಈಗಿನ ದಿನಗಳಲ್ಲಿ ಪೂಜೆ, ಜಾತ್ರೆ, ಯಾತ್ರೆಗಳು ವಿಪರೀತ ಹೆಚ್ಚಿವೆ. ಭವ್ಯ ಮಂದಿರಗಳ ನಿರ್ಮಾಣವೇ ನಮ್ಮ ಬಹುಮುಖ್ಯ ಆದ್ಯತೆ ಆಗಿಹೋಗಿದೆ. ಈಗ ಯೋಚಿಸಬೇಕಾದದ್ದು ಎಲ್ಲೆಲ್ಲೂ ಗುಡಿ, ಚರ್ಚು, ಮಸೀದಿಗಳ ನಿರ್ಮಾಣದಿಂದ ಆಗುವ ತೊಂದರೆಗಳ ಬಗ್ಗೆ. ಬಹಳಷ್ಟು ಪ್ರಾರ್ಥನಾ ಮಂದಿರಗಳು ನಿರ್ಮಾಣವಾಗುವುದು ಸಾರ್ವಜನಿಕ ರಸ್ತೆ, ಕೆರೆ, ಬೆಟ್ಟಗಳಲ್ಲಿ. ಹೆಚ್ಚು ಜನನಿಬಿಡ ರಸ್ತೆಗಳಂತೂ ದೇವರಿಗೆ ಬಲು ಪ್ರೀತಿ. ಬಡಾವಣೆಗಳಲ್ಲಿ ಕಡ್ಡಾಯವಾಗಿ ಬಿಡಬೇಕಾದ ಉದ್ಯಾನದ ಜಾಗಗಳು ಹಲವೆಡೆ ಪ್ರಾರ್ಥನಾ ಮಂದಿರಗಳಿಗೆ ಮೀಸಲಾಗಿ ಹೋಗಿವೆ.