ಎಚ್.ಡಿ.ಕುಮಾರಸ್ವಾಮಿ ಹಿಂದಿನ ತಮ್ಮ ವರ್ಚಸ್ಸನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ, ಸರ್ಕಾರ ಉಳಿಸಿಕೊಳ್ಳುವಲ್ಲಿಯೇ ತಮ್ಮ ಜಾಣ್ಮೆ, ಸಮಯ, ಶ್ರಮ ವ್ಯಯಿಸುತ್ತಿದ್ದಾರೆ.
ವಿಶ್ವಾಸಮತ ಯಾಚಿಸುವ ಕಸರತ್ತು ನಡೆಸುವುದಕ್ಕಿಂತ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಒಳಿತೇನೋ ಎಂಬಂತಿದೆ ಈಗಿನ ಸ್ಥಿತಿ.ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಎದುರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ರಾಜ್ಯಪಾಲರಿಗೆ ಇದೆ. ಜನರ ಮೇಲೆ ಅವಧಿಗೆ ಮುನ್ನ ಅನಗತ್ಯ ಚುನಾವಣೆ ಹೊರೆ ಹೇರುವುದನ್ನು ತಪ್ಪಿಸಿ ಪ್ರಜಾತಂತ್ರ ಉಳಿಸಬೇಕಾಗಿದೆ. -ಆರ್.ವೆಂಕಟರಾಜು, ಬೆಂಗಳೂರು