ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿದ್ದಾಗ ಮನ ಮಿಡಿದಿದ್ದರೆ...

ಅಕ್ಷರ ಗಾತ್ರ

ಶ್ರೀರಂಗಪಟ್ಟಣ ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಯಾವುದೇ ಪಗಾರ ಸಿಗದಿದ್ದರೂ ಹಲವು ವರ್ಷಗಳಿಂದ ಬೀದಿ ಗುಡಿಸುವ ಕೆಲಸವನ್ನು ಮಾಡುತ್ತಿದ್ದ ರಂಗಯ್ಯ ಎಂಬ ಪೌರಕಾರ್ಮಿಕ ಮೃತಪಟ್ಟಿದ್ದು, ಅವರಿಗೆ ಊರವರು ಸಕಲ ಮರ್ಯಾದೆಯೊಂದಿಗೆ ಅಂತಿಮ ವಿದಾಯ ಹೇಳಿದ್ದಾಗಿ ವರದಿಯಾಗಿದೆ (ಪ್ರ.ವಾ., ಮಾರ್ಚ್‌ 3). ಈ ಕಾರ್ಯಕ್ಕೆ ಆ ಊರಿನವರು ಅಭಿನಂದನಾರ್ಹರು. ಆದರೆ ರಂಗಯ್ಯ ಪಗಾರ ಇಲ್ಲದೆ ನಿಷ್ಠೆಯಿಂದ ದುಡಿಯುತ್ತಿದ್ದ ಸಂದರ್ಭದಲ್ಲಿ, ಅಂದರೆ ಬದುಕಿದ್ದಾಗ ಆತನಿಗೆ ಏನಾದರೂ ಆರ್ಥಿಕಾನುಕೂಲ ಕಲ್ಪಿಸಿದ್ದರೆ, ಊರವರು ಅವರ ಮೇಲೆ ಇಟ್ಟಿದ್ದ ಪ್ರೀತಿ ಸಾರ್ಥಕವಾಗುತ್ತಿತ್ತು.

- ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT