ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಗಣತಿ ವರದಿ: ಸಮಸ್ಯೆಗೆ ಮದ್ದು

ಅಕ್ಷರ ಗಾತ್ರ

ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಿದ್ಧಪಡಿಸಿರುವ ಸಾಮಾಜಿಕ, ಶೈಕ್ಷಣಿಕ ವರದಿಯನ್ನು ಸರ್ಕಾರ ಸ್ವೀಕರಿಸಿ ಅಲ್ಲಿನ ಅಂಶಗಳನ್ನು ಬಹಿರಂಗಗೊಳಿಸಿದರೆ, ಈಗ ಮೀಸಲಾತಿ ಹೆಚ್ಚಳ ಮತ್ತು ಪ್ರವರ್ಗಗಳ ಬದಲಾವಣೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಸೂಕ್ತ ಉತ್ತರ ಕಂಡುಕೊಳ್ಳಲು ಸಹಾಯಕ ವಾಗುತ್ತದೆ ಎಂದು ವಿಧಾನಪರಿಷತ್ತಿನಲ್ಲಿ ಇತ್ತೀಚೆಗೆ ಪಕ್ಷಭೇದವಿಲ್ಲದೆ ಹಲವು ಸದಸ್ಯರು ಒಕ್ಕೊರಲಿನಿಂದ ಹೇಳಿರುವುದು ಸಮಯೋಚಿತವಾಗಿದೆ.

ಯಾವ ಯಾವ ಸಮುದಾಯಗಳು ಆರ್ಥಿಕ,ಶೈಕ್ಷಣಿಕ ಮತ್ತು ರಾಜಕೀಯ ರಂಗಗಳಲ್ಲಿ ಹಿಂದುಳಿದಿವೆ ಮತ್ತು ಮುಂದುವರಿದಿವೆ ಎಂಬ ನಿಜಾಂಶ ಈ ವರದಿಯಿಂದ ಹೊರಬೀಳುತ್ತದೆ. ಆಗ ನಿಜಕ್ಕೂ ಹಿಂದುಳಿದ ಸಮುದಾಯಗಳಿಗೆ ವೈಜ್ಞಾನಿಕವಾಗಿ ಮೀಸಲಾತಿಯನ್ನು ಪುನರ್ ನಿಗದಿಗೊಳಿಸಲು ಮತ್ತು ಪ್ರವರ್ಗಗಳನ್ನು ಹೊಸದಾಗಿ ಕಲ್ಪಿಸಲು ಅನುಕೂಲವಾಗುತ್ತದೆ. ಆ ಮೂಲಕ, ಈಗ ಎದ್ದಿರುವ ಮೀಸಲಾತಿ ಬೇಡಿಕೆಯ ಹೋರಾಟಕ್ಕೆ ಸೂಕ್ತ ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ಜಾತಿ ಜನಗಣತಿ ವರದಿಯನ್ನು ಸರ್ಕಾರ ಶೀಘ್ರವೇ ಬಹಿರಂಗಪಡಿಸಿ, ಈಗ ಸೃಷ್ಟಿಯಾಗಿರುವ ಮೀಸಲಾತಿಯ ಗೊಂದಲಕ್ಕೆ ತೆರೆ ಎಳೆಯುವುದು ಸಮಂಜಸ.

- ಸಿ.ಪಿ.ಸಿದ್ಧಾಶ್ರಮ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT